ಮಗನ ಮನೆಗೆ ಹೋಗಲೇ ಇಲ್ಲ ತಾಯಿ : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆ ಮೇಲೆ ಹಾಯ್ದ ಬಸ್…!
ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧನ ಮೇಲೆ ಬಸ್ಸೊಂದು ಹಾಯ್ದು ಸ್ಥಳದಲ್ಲೇ ವೃದ್ಧೆಯೊಬ್ಬಳು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಿಯಾಮಾ ನಬೀಸಾಬ ಟಕ್ಕಳಕಿ(67) ಸಾವಿಗೀಡಾದ ವೃದ್ಧ. ತನ್ನ ಮನೆಯಿಂದ ಮಗನ ಮನೆಗೆ ಉಪಹಾರ ಸೇವಿಸಲು ಹೊರಟಿದ್ದ ವೃದ್ದೇ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈಕೆ ನಿಂತ ಜಾಗಕ್ಕೆ ಬಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿರುವ ಮುದ್ದೇಬಿಹಾಳ ಘಟಕದ ಮುದ್ದೇಬಿಹಾಳ-ಇಲಕಲ್ ಮಾರ್ಗದ ಕೆಎ 28/ಎಫ್-1826 ನಂಬರಿನ ಬಸ್ ಮೇಲೆ ಹರಿದಿದೆ.
ಬಸ್ ನ ಮುಂದಿನ ಗಾಲಿಗೆ ಸಿಲುಕಿದ ವೃದ್ಧೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಬಸ್ ಚಾಲಕ ಕುಲಕರ್ಣಿ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.