ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಗಂಡನೇ ಕಾವಲುಗಾರ; ರಾಜಸ್ಥಾನದಲ್ಲೊಂದು ಹೇಯ ಕೃತ್ಯ
ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಆಕೆಯ ಗಂಡನೇ ಅವಕಾಶ ಮಾಡಿಕೊಟ್ಟಿರುವ ಅಮಾನವೀಯ ಕೃತ್ಯ ರಾಜಸ್ಥಾನ್ನ ಆಲ್ವಾರ್ ಜಿಲ್ಲೆಯ ಶಹಜಹಾನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆಯಾದ ಗಂಡನೇ ತನ್ನ ಪತ್ನಿಯನ್ನು ಮಾರುಕಟ್ಟೆಗೆ ಗಹೋಗುವ ನೆಪಹೇಳಿ ಕರೆದೊಯ್ದು ತನ್ನ ಸ್ನೇಹಿತನಿಗೆ ಆಕೆಯ ಮೇಲೆ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿರುವ ಹೇಯ ಕೃತ್ಯ ನಡೆದಿದೆ.
ಮೇ 31 ರಂದು ಆರೋಪಿ ತನ್ನ ಹೆಂಡತಿಯನ್ನು ಮಾರುಕಟ್ಟೆಗೆ ಹೋಗುವ ನೆಪದಲ್ಲಿ ತನ್ನ ಸ್ನೇಹಿತನ ಮೋಟಾರ್ ಸೈಕಲ್ನಲ್ಲಿ ಕರೆದೊಯ್ದಿದ್ದನು. ಇದೇ ವೇಳೆ ಸ್ನೇಹಿತನೂ ಕೂಡ ಜೊತೆಗೆ ಬಂದಿದ್ದ. ಆದರೆ ಮಾರುಕಟ್ಟೆಯ ಬದಲು ಅವರು ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಸ್ನೇಹಿತ ಬಲ್ವಾನ್ಗೆ ನನ್ನ ಮೇಲೆ ಅತ್ಯಾಚಾರ ಎಸಗುವಂತೆ ಗಂಡನೇ ಸೂಚಿಸಿದ್ದನು. ಇದೇ ವೇಳೆ ಪತಿ ಕೋಣೆಯ ಹೊರಗೆ ಕಾವಲು ಕಾಯುತ್ತಾ ನಿಂತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ನಾನು ಎಲ್ಲೂ ಬಾಯಿ ಬಿಟ್ಟಿರಲಿಲ್ಲ ಎಂದು ಆಕೆ ಹೇಳಿದ್ದಾರೆ. ಆದರೆ, ಅತ್ಯಾಚಾರದ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆಯು ನಾಲ್ಕು ದಿನದ ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಗಂಡನ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸಂತ್ರಸ್ತೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಅತ್ಯಾಚಾರಿ ಹಾಗೂ ಸಂತ್ರಸ್ತೆಯ ಪತಿ ಪರಾರಿಯಾಗಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಡಿ (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಎಸ್ಪಿ ಲೋಕೇಶ್ ಮೀನಾ ತಿಳಿಸಿದ್ದಾರೆ.