ಮೊಹರಮ್‌ ಹಬ್ಬದ ವೇಳೆ ಬಾವಿಯ ಬಂಡೆಗೆ ಬಿದ್ದು ವ್ಯಕ್ತಿ ಮೃತ…!

ಮೊಹರಮ್‌ ಹಬ್ಬದ ಪ್ರಯುಕ್ತ ಪೀರಲ ದೇವರ ನೀರಲ್ಲಿ ಹಾಕುವ ಸಂಧರ್ಭದಲ್ಲಿ ಬಾವಿಯ ಬಂಡೆಗೆ ಬಿದ್ದು ಹನಸಿ ಗ್ರಾಮದ ಖಾಸಿಂ ಅಲಿ(29) ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ.

ಮೊಹರಮ್ ಆಚರಣೆಯ ಕೊನೆಯ ದಿನವಾದ ನಿನ್ನೆ ದೇವರನ್ನು ನೀರಲ್ಲಿ ಹಾಕಿ, ಈಜಲು ಬಾವಿಯಲ್ಲಿ ಜಿಗಿಯುವಾಗ ಬಾವಿಯ ಬಂಡೆಗೆ ಬಿದ್ದು ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಖಾಸಿಂ ಅಲಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಬಾವಿಗೆ ಬಿದ್ದವನನ್ನು ಜತೆ ಇದ್ದವರೂ ಹೊರತೆಗೆದಿದ್ದು ದೇಹಕ್ಕೆ ಬಲವಾದ ಹೊಡೆತ ಬಿದ್ದದರಿಂದ ನೀರಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights