ರಂಗೇರಿದ ಉಪ ಚುನಾವಣೆ ಕದನ : ಎಸ್ಪಿ ರವಿ ಡಿ ಚೆನ್ನಣ್ಣನವರ್ ರಿಂದ ರೌಡಿ ಪರೇಡ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಕದನ ರಂಗೇರುತ್ತಿರೂ ಹಿನ್ನೆಲೆಯಲ್ಲಿ ಎಸ್ಪಿ ರವಿ ಡಿ ಚೆನ್ನಣ್ಣನವರ್ ರಿಂದ ರೌಡಿ ಪರೇಡ್ ಮಾಡಲಾಯ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಡಿ ಚೆನ್ನಣ್ಣನವರ್, ಹೊಸಕೋಟೆ ಕ್ಷೇತ್ರದ ರೌಡಿ ಶೀಟರ್ಗಳ ರೌಡಿ ಪರೇಡ್‌ ಮಾಡಿದರು. ರೌಡಿ ಪರೆಡ್ ನಲ್ಲಿ 100 ಕ್ಕೂ ಅಧಿಕ ರೌಡಿಶೀರ್ಟ್ಗಳು ಹಾಜರಾಗಿದ್ದರು. ಈ‌ ಬಾರಿಯ ಚುನಾವಣೆಯಲ್ಲಿ ಬಾಲ ಬಿಚ್ಚದಂತೆ ರೌಡಿಗಳಿಗೆ ವಾರ್ನಿಂಗ್ ನೀಡಲಾಗಿದೆ.

ಗಾಂಜಾ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಬಾಲ ಬಿಚ್ಚಿದ್ರೆ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳೋದಾಗಿ ಎಸ್ಪಿ ರವಿ ಡಿ ಚೆನ್ನಣ್ಣನವರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights