ರಸ್ತೆ ಗುಂಡಿಗಳಿಂದ ಉಂಟಾಗುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ- ರಾಜ್ಯ ಹೈಕೋರ್ಟ್ ತೀರ್ಪು
ನಗರಗಳು ಎಷ್ಟೇ ಬೆಳೆದಂತೆ ಕಂಡರೂ ಕೂಡ ಮೂಲಭೂತಸೌಕರ್ಯಗಳಿಂದ ಜನ ಇಂದಿಗೂ ವಂಚಿತರಾಗಿ ಬದುಕುತ್ತಿದ್ದಾರೆ. ವಸತಿ, ನೀರಿನ ಸೌಲಭ್ಯ, ವಿದ್ಯುತ್, ರಸ್ತೆ ವ್ಯವಸ್ಥೆ ಹೀಗೆ ಹಲವಾರು ಸೌಲಭ್ಯಗಳಿಂದು ಬಹುತೇಕ ಜನ ದೂರ ಉಳಿದಿದ್ದಾರೆ. ಆದರೆ ಕೆಲ ಸೌಕರ್ಯಗಳು ಇಲ್ಲದೆ ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಪಾತಾಳಕ್ಕೆ ಬಿದ್ದಂತೆ ಬಾಸವಾಗುವ ರಸ್ತೆ ಗುಂಡಿಗಳು. ರಸ್ತೆ ದುರಸ್ಥಿಯಿಂದ ಪ್ರಾಣ ಕಳೆದುಕೊಳ್ಳುವ ವಾಹನ ಸವಾರರ ಹೊಣೆ ಯಾರು ಎಂಬ ಪ್ರಶ್ನೆಗೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ.
ರಸ್ತೆಗುಂಡಿ ಅಪಘಾತಕ್ಕೆ ಪಾಲಿಕೆಯೇ ಹೊಣೆ ಅಂತ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ನ್ಯಾಯಾಲಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ ಎಂಬ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಬಿಬಿಎಂಪಿಗೆ ಛಿಮಾರಿ ಹಾಕಿದೆ.
ರಸ್ತೆ ನಿರ್ವಹಣೆ ನಿರ್ಲಕ್ಷ್ಯದಿಂದ ಉಂಟಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಪಾಲಿಕೆಯದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.