ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್ – ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ವಿಶ್ವನಾಥ್ ಒಬ್ಬ ಸಿಸನ್ ಪಾಲಿಟಿಷಿಯನ್ ಮೈಸೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ಮಾಡಿದ್ದಾರೆ.
ಹೃದಯದಲ್ಲಿ ಇರುವುದೇ ಬೇರೆ ಜನರ ಮುಂದೆ ಹೇಳೋದೆ ಬೇರೆ. ಇದೇಲ್ಲವು ಜನಕ್ಕೆ ಅರ್ಥವಾಗುತ್ತೆ. ಜನ ಇದನ್ನ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ.
ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನ ಟೀಕೆ ಮಾಡಿದ್ರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತೆ ಅನ್ನೋದು ವಿಶ್ವನಾಥ್ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು, ದೇಶದ ರಾಜಕೀಯದಲ್ಲಿ ಏನು ಬೇಕಾದ್ರು ಆಗಬಹುದು. ಕರ್ನಾಟಕದ ರಾಜಕಾರಣಕ್ಕು ಇದು ಅನ್ವಯ ಎಂದರು. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲು ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ. ಮಹಾರಾಷ್ಟ್ರ ಗುಜರಾತ್ ಬೇರೆ ಕರ್ನಾಟಕ ಬೇರೆ. ಅನರ್ಹ ವಿಚಾರ ದುಷ್ಪರಿಣಾಮ ಬೀರಿದೆ ಅನ್ನೋದನ್ನ ಒಳಹೊಕ್ಕಿ ನೋಡೋಲು ಹೋಗಿಲ್ಲ. ಆ ಬಗ್ಗೆ ಜನ ನಿರ್ಧಾರ ಮಾಡ್ತಾರೆ ಎಂದರು.
ಬಿಎಸ್ವೈ ಎಷ್ಟು ದುಡ್ಡು ಸಾಗಿಸಿದ್ರು ಯಾರು ಕೇಳೋಲ್ಲ. ಅದಕ್ಕೆ 15ಕ್ಕೆ 15 ಗೆಲ್ತಿನಿ ಅಂತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪ ಮಾಡಿದ್ದಾರೆ. ಬಿಎಸ್ವೈ ಬಳಿ ಸರ್ಕಾರ ಇದೆ. ಗುಪ್ತವಾರ್ತೆ ಇದೆ. ಎಲ್ಲೆಲ್ಲಿ ಹಿಂದೆ ಬಿದ್ದಿದ್ದೀರಾ ಅಂತ ಗುಪ್ತವಾರ್ತೆ ತಕ್ಷಣವೆ ಹೇಳ್ತಿದ್ದಾರೆ. ಆರ್ಥಿಕವಾಗಿ ಶಕ್ತಿಯಿದೆ. ಅವರು ಎಷ್ಟೆ ಹಣ ಸಾಗಿಸಿದ್ರು ಯಾರು ಕೇಳೋರಿಲ್ಲ. ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ ಎಂದಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ ಎಂದಿದ್ದಾರೆ. ಮಂತ್ರಿಗಳಿಗು ಹಣ ಬೇಕಿದ್ದರೆ ಅಲ್ಲಿಂದಲೇ ಪೋನ್ ಮಾಡಿ ನಾನು ಕಳುಹಿಸ್ತಿನಿ ಎಂದಿದ್ದಾರೆ. ಇಷ್ಟೇಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತೆ. ಬಿಎಸ್ವೈ ದುಡ್ಡಿನಿಂದ ಚುನಾವಣೆ ಮಾಡ್ತಿದ್ದಾರೆ ಅಂತ ಆರೋಪಿಸಿದರು.