ಸರಸವಾಡುವಾಗಲೇ ಕಲಹಮಾಡಿಕೊಂಡು ಗೆಳೆಯನ ಕೊಂದ ಮಧನಾರಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸರಸವಾಡುವಾಗಲೇ ಕಲಹಮಾಡಿಕೊಂಡ ಮಧನಾರಿ ಗೆಳೆಯನನ್ನೇ ಕೊಂದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಹೌದು… ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ನಿವಾಸಿ ಮಂಜು(43) ಕೊಲೆಯಾದ ದುರ್ದೈವಿ. ಈತ ಹೊಳೆನರಸೀಪುರದ ವಸಂತ ಎಂಬಾಕೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ತನ್ನ ಮಧನಾರಿ ಜೊತೆ ರಾತ್ರಿ ಒಟ್ಟಿಗೇ ಕುಡಿದು ತಿಂದು ಸರಸದಲ್ಲಿ ತೊಡಗಿರುವಾಗಲೇ ಮಂಜನ ಮೇಲೆ ವಸಂತಳಿಂದ ಹಲ್ಲೆ ಮಾಡಲಾಗಿದೆ. ಇಬ್ಬರೂ ಬೆತ್ತಲೆ ಇರುವಾಗಲೇ ಬಡಿದಾಡಿಕೊಂಡಿದ್ದಾರೆ. ನಂತರ ವಸಂತಾಳು ದೊಣ್ಣೆಯಿಂದ ಮಂಜು ತಲೆಗೆ ಹೊಡೆದು ಬೆತ್ತಲಾಗೇ ಓಡುತ್ತಿರೊ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಜ ತಲೆಗೆ ತೀವೃ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಮಂಜನ ಮೃತದೇಹ ಡಿಸೆಂಬರ್ 2 ರಂದು ಸೋಮವಾರ ಪುರಸಭೆ ಮಳಿಗೆ ಮುಂದೆ ಬೆತ್ತಲಾಗಿ ಪತ್ತೆಯಾಗಿದೆ. ಡಿಸೆಂಬರ್ 1 ರ ರಾತ್ರಿ ನಡೆದ ಹತ್ಯೆ ಪ್ರಕರಣ ಬೇಧಿಸಿದ ಹೊಳೆನರಸೀಪುರ ಸಿಪಿಐ ಅಶೋಕ್ ನೇತೃತ್ವ ತಂಡ ವಂಸತಳನ್ನು ಬಂಧಿಸಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.