ಸಿದ್ದರಾಮಯ್ಯ ಅವರೇ, ಈಗ ಹೇಳಿ ಯಾರು ಅಮಾಯಕರು? : ವಿ.ಸೋಮಣ್ಣ
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟದ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ವಾಕ್ ದಾಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಮಂಗಳೂರು ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಪ್ರತಿಭಟನಾಕಾರರು ಕಲ್ಲು ಹೊಡೆದಿಲ್ಲ. ಪೊಲೀಸರು ಗುಂಡಿನ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮೈತ್ರಿ ಪಕ್ಷಗಳು ರಾಜಕೀಯ ಬಣ್ಣ ಬಡೆದಿದ್ವು. ಸದ್ಯ ಈ ಬಣ್ಣಕ್ಕೆ ಪೊಲೀಸರು ನೀರು ಎರಚಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ, ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದು ಹೀಗೆ…
ಮಂಗಳೂರಿನಲ್ಲಿ ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿಟಿಪ್ಪುಗಳ ಹೇಯಾ ಕೃತ್ಯ ಇದು. ಮಂಗಳೂರು ಪೊಲೀಸರ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ, ಗಲಭೆ ವಿಡಿಯೋ ಕುರಿತು ಮೈಸೂರಿನಲ್ಲಿ ಸಂಸದ ಪ್ರತಾಪ ವಾಗ್ದಾಳಿ ಮಾಡಿದ್ದಾರೆ.
ಕಲ್ಲುಗಳನ್ನ ತಂದು ಎಸೆದಿದ್ದಾರೆ. ಐಸಿಯೂ ಒಳಗೆ ಹೋಗಿ ಗಲಾಟೆ ಮಾಡಿದ್ದಾರೆ. ಇಂತದ್ದನ್ನೆಲ್ಲ ಟಿಪ್ಪು ವಂಶಸ್ಥರು ಮಾತ್ರ ಮಾಡೋಕೆ ಸಾಧ್ಯ. ಇವರನ್ನ ಸಿದ್ದರಾಮಯ್ಯ ಅಮಾಯಕರು ಅಂತಾರೆ. ಸಿಸಿಟಿವಿ ದೃಶ್ಯ ನೋಡಿ ಈಗ ಸಿದ್ದರಾಮಯ್ಯ ರಮೇಶ್ ಕುಮಾರ್ ಮಾತನಾಡಲಿ. ಕಾಂಗ್ರೆಸ್ ಓಟು ಹಾಕಿದ್ರೆ ಸಾಕು ಅವರು ಅಮಾಯಕರು. ಕಲ್ಲಿನಿಂದ ಹೊಡೆದರೆ ಜನ ಬದುಕುತ್ತಾರಾ. ತಮ್ಮ ಪ್ರಾಣ ಹೋಗ್ತಿದ್ರು ಪೊಲೀಸರು ಜನರ ರಕ್ಷಣೆಗೆ ನಿಂತಿದ್ದಾರೆ. ಅವರ ಕರ್ತವ್ಯದ ಬಗ್ಗೆ ಮಾತನಾಡುವವರು ಆತ್ಮಸಾಕ್ಷಿ ಕೇಳಿಕೊಳ್ಳಲಿ. ಸಿದ್ದರಾಮಯ್ಯ ರಮೇಶ್ ಕುಮಾರ್ ಮಂಗಳೂರು ಗನಂಧಾರಿ ಕೆಲಸ ಮಾಡಲು ಹೋಗಿರಲಿಲ್ಲ.
ತಮ್ಮ ಮರಿಟಿಪ್ಪುಗಳು ಮಾಡಿರುವ ತಪ್ಪು ಮುಚ್ಚಲು ಹೋಗ್ತಿದ್ರು ಅನ್ನೋದು ಇದರಲ್ಲೆ ಗೊತ್ತಾಗುತ್ತೆ. ಸುರೇಶ್ ಅಂಗಡಿ ಹೇಳಿರುವ ಮಾತಿಗೆ ನಾನು ಬದ್ದ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿ.
ಕಾಂಗ್ರೆಸ್ ಸೊಳ್ಳೆ ಇದ್ದಂತೆ.! ಕೊಚ್ಚೆ ಎಲ್ಲಿರೋತ್ತೋ ಅಲ್ಲಿಗೆ ಸೊಳ್ಳೆ ಹುಡುಕಿಕೊಂಡು ಹೋಗುತ್ತೆ. ಕಾಂಗ್ರೆಸ್ ಎಲ್ಲಿರೋತ್ತೋ ಅಲ್ಲಿ ನಿರುದ್ಯೋಗ ಅನಕ್ಷರತೆ ದೌರ್ಜನ್ಯ ಬಡತನ ಇದ್ದೆ ಇರತ್ತೆ. ಅವರನ್ನೆಲ್ಲ ಇಟ್ಟುಕೊಂಡು ಈ ರೀತಿಯ ಗಲಭೆ ಮಾಡಿಸುತ್ತಿದ್ದಾರೆ. ಈ ರೀತಿಯ ಗಲಭೆ ಮಾಡುತ್ತಿರುವವರು ಸಿದ್ದರಾಮಯ್ಯದ ಸೃಷ್ಟಿಸಿದ ಮರಿ ಟಿಪ್ಪುಗಳು. ಆ ರೀತಿಯ ಮರಿ ಟಿಪ್ಪುಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ. ಆಸ್ಪತ್ರೆಗೆ ನುಗ್ಗಿ ಬಾಗಿಲು ಹಾಕಿಕೊಂಡು ರೋಗಿಗಳ ಮೇಲೆ ಹಲ್ಲೆ ನಡೆಸ್ತಾರೆ. ಆ ರೀತಿಯ ಅಮಾನವೀಯ ಕೃತ್ಯ ನಡೆಸೋದು ಯಾರು ಎಂಬುದು ಈಗ ಯಾರು ಅಂತ ಗೊತ್ತಾಗಿದೆ. ಕಾಂಗ್ರೆಸ್ಗೆ ಅಧಿಕಾರದ ಚಡಪಡಿಕೆ ಶುರುವಾಗಿದೆ. ಬಿಜೆಪಿ ಇದ್ದ ಕಡೆ ಈ ರೀತಿ ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯೋ ಹುನ್ನಾರ. ಕೋಮು ದಳ್ಳುರಿ ಸೃಷ್ಟಿಸಿ ಅಧಿಕಾರ ಹಿಡಿಯೋ ಯು.ಟಿ.ಖಾದರ್ ಹೇಳಿಕೆ, ಸಿದ್ದರಾಮಯ್ಯ ನಡುವಳಿಕೆಯೇ ಸಾಕ್ಷಿ. ಈ ಮೂಲಕ ಅಲ್ಪಾ ಸಂಖ್ಯಾತರನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ, ಈಗ ಹೇಳಿ ಯಾರು ಅಮಾಯಕರು ? ವಿ.ಸೋಮಣ್ಣ ಪ್ರಶ್ನೆ :-
ವಸತಿ ಸಚಿವ ವಿ.ಸೋಮಣ್ಣ ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಗೆ ಇದೀಗ ಸಾಕ್ಷಿಗಳು ಲಭ್ಯವಾಗಿವೆ. ಇವತ್ತು ಸಿಸಿ ಟಿವಿ ಕ್ಯಾಮರಾಗಳಿಂದ ಸಾಕ್ಷಿಗಳು ಹೊರಗಡೆ ಬಂದಿವೆ. ಈ ಬಗ್ಗೆ ನನಗೆ 20ರಂದು ಮಾಹಿತಿ ಲಭ್ಯವಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಡಾ.ಹರ್ಷ ದಕ್ಷ ಅಧಿಕಾರಿ. ಗಲಭೆ ಆರಂಭದಲ್ಲೇ ಇದು ಎಲ್ಲಿಗೆ ಮುಟ್ಟುತ್ತೋ ಎನ್ನವ ಆತಂಕ ವ್ಯಕ್ತಪಡಿಸಿದ್ದರು. ಬೇಕಂತಲೇ ಕೆಲವರು ಸಂಚು ಮಾಡಿದ್ದಾರೆಂದು ಹೇಳಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ಕಲ್ಲುಗಳನ್ನು ಸಾಗಿಸಿದ್ದಾರೆ. ಆಟೋಗಳಲ್ಲಿ ಕಲ್ಲುಗಳನ್ನು ಸಾಗಿಸಿದ್ದಾರೆ. ಆಸ್ಪತ್ರೆಯ ಐಸಿಯುಗೆ ಹೋಗಿದ್ದಾರೆ. ಅಲ್ಲಿ ಹೋಗಿ ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ದಾಳಿ ಮಾಡಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಉತ್ತರ ಕೊಡಬೇಕು. ಅಮಾಯಕರು ಯಾರು ಮೇಲೆ ದಾಳಿ ಮಾಡಿದ್ದಾರೆ ಅಂತ ಅವರೇ ಹೇಳಬೇಕು ಎಂದು ಕಿಡಿ ಕಾರಿದ್ದಾರೆ.
ವ್ಯವಸ್ಥಿತ, ಷಡ್ಯಂತ್ರ ಮಾಡಿ ಗಲಭೆ ಮಾಡಿದ್ದಾರೆಂದು ಸ್ಪಷ್ಟವಾಗಿದೆ. ಪ್ರತಿಭಟನೆ ಮಾಡುತ್ತಿರುವವರು ಪೌರತ್ವ ಇಲ್ಲದವರಾ.?ಇಂತಹ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಇದನ್ನ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೂ ಹೇಳುತ್ತೇನೆ.ನಿನ್ನೆ ಈ ಬಗ್ಗೆ ಪ್ರಧಾನಿಗಳು ಸುದೀರ್ಘವಾಗಿ ಭಾಷಣ ಮಾಡಿದ್ದಾರೆ. ಜನರಿಗೆ ಕಾಯ್ದೆಯನ್ನು ಅರ್ಥೈಸಲು ಪ್ರಯತ್ನ ಪಟ್ಟಿದ್ದಾರೆ. ಇಂತಹ ವಿಚಾರದಲ್ಲಿ ರಾಜಕೀಯ ಮಾಡೋದು ಶೋಭೆ ತರಲ್ಲ ಎಂದು ಗುಡುಗಿದ್ದಾರೆ.