ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ ‘ಬಿಚ್ಚುಗತ್ತಿ’
ಇತ್ತೀಚೆಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಂತಹ ಐತಿಹಾಸಿಕ ಸಿನಿಮಾಗಳು ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ದಂತಹ ಸಿನಿಮಾಗಳಿಗೆ ಪ್ರೇಕ್ಷಕರು ಜೈ ಎನ್ನುತ್ತಿರುವಾಗ ಮತ್ತೊಂದು ಐತಿಹಾಸಿಕ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಸದ್ದು ಮಾಡಿದೆ.
‘ಬಿಚ್ಚುಗತ್ತಿ’ ಹೆಸರೇ ಹೇಳುವಂತೆ ಬಿಚ್ಚುಗತ್ತಿ ಸಿನಿಮಾದಲ್ಲಿ ಕತ್ತಿಯದ್ದೇ ಕಾರುಬಾರು. ದುರ್ಗದ ದಳವಾಯಿ ದಂಗೆಯನ್ನ ಸಾರುವಂತಹ ಅದ್ಧೂರಿ ಸಿನಿಮಾ. ಈಗಾಗ್ಲೇ ಟೀಸರ್ ಮತ್ತು ಹಾಡುಗಳಿಂದ ಸಖತ್ ಸದ್ದು ಸುದ್ದಿ ಮಾಡಿದ ಈ ಚಿತ್ರ ಇದೀಗ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನ ಟ್ರೆಂಡಿಂಗ್ ನಿರ್ದೇಶಕರು ಮತ್ತು ನಾಯಕ ನಟರ ಸಮ್ಮುಖದಲ್ಲಿ, ನಾತದ ಬ್ರಹ್ಮ ಹಂಸಲೇಖ ಸಾರಥ್ಯದಲ್ಲಿ ಗ್ರ್ಯಾಂಡ್ ಆಗಿ ಟ್ರೈಲರ್ ನ ಲಾಂಚ್ ಮಾಡಿದ್ದಾರೆ.
ಬಿಚ್ಚುಗತ್ತಿ ಚಾಪ್ಟರ್ 1 ಟ್ರೈಲರ್ ಸಖತ್ ಕ್ವಾಲಿಟಿಯಾಗಿದೆ. ಕಲ್ಲಿನ ಕೋಟೆ ನಾಡು ಚಿತ್ರದುರ್ಗದ ಮಣ್ಣಿನ ಕಥೆಯನ್ನ ಹೇಳುವು ಇತಿಹಾಸವನ್ನ ಮರುಸೃಷ್ಟಿಸಿರುವ ಈ ಕಥೆಯನ್ನ ನಿರ್ದೇಶಕ ಹರಿಸಂತು ಅಷ್ಟೇ ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಟೆಕ್ನಿಕಲಿ ತುಂಬಾನೇ ಸ್ಟ್ರಾಂಗ್ ಆಗಿ ಕಾಣ್ತಿರೋ ಬಿಚ್ಚುಗತ್ತಿ ಟ್ರೈಲರ್ ಬಾಹುಬಲಿ ಸಿನಿಮಾವನ್ನ ನೆನೆಪಿಸ್ತಿದೆ. ಸಾಹಸಗಳು, ಸನ್ನಿವೇಷಗಳು ಮತ್ತು ಕಾಲಗಟ್ಟ ಅಷ್ಟು ಮಜಭೂತಾಗಿ ಸೆರೆಯಾಗಿದೆ. ಬಿಚ್ಚುಗತ್ತಿ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ ಅಂಗಳದಲ್ಲಿ ಅದ್ಧೂರಿಯಾಗಿ ಎಂಟ್ರಿಕೊಡ್ತಿರೋ ರಾಜ್ ವರ್ಧನ್ ಆರಡಿ ಹೈಟ್ ಹೀರೋ ಆಗಿ ರಾಜನಂತೆ ಮಿಂಚಿದ್ದಾರೆ. ದಳವಾಯಿ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇವರ ಜೋಡಿಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದು, ಟ್ರೈಲರ್ ನಲ್ಲಿರೋ ಹರಿಪ್ರಿಯ ಝಲಕ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ.
ಬಾಹುಬಲಿಯಲ್ಲಿ ಕಾಲಕೇಯನ ಪಾತ್ರ ಮಾಡಿದ್ದ ಪ್ರಭಾಕರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಆರ್ಭಟಿಸಿದ್ದಾರೆ. ಚಿತ್ರದಲ್ಲಿ ಪ್ರಭಾಕರ್ ಪಾತ್ರವೂ ಹೈಲೈಟ್ ಆಗಿ ಕಾಣ್ತಿದೆ. ಇನ್ನು ಉಳಿದಂತೆ. ಚಿತ್ರದ ತಾರಾಗಣ ದೊಡ್ಡದಾಗಿದ್ದು, ಎಲ್ಲಾ ಹಿರಿಯ ಮತ್ತು ಅನುಭವಸ್ಥ ಕಲಾವಿದ್ರು ಚಿತ್ರದಲ್ಲಿದ್ದಾರೆ. ಟ್ರೈಲರ್ ನಲ್ಲಿ ಎಲ್ಲಾ ಪಾತ್ರಗಳು ನೈಜವಾಗಿ ಕಾಣ್ತಿದ್ದು, ಸಿನಿಮಾದೂದಕ್ಕೂ ಆ ಕಾಲದ ಮೆರಗು ಮೇಳೈಸಿರೋ ಹಾಗಿದೆ. ನಕುಲ್ ಅಭಯಂಕರ್ , ಹಂಸಲೇಖ ಸಂಗೀತ ಸಂಯೋಜನೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರೋ ಹಾಡುಗಳು ಇಂಪ್ರೆಸೀವ್ ಆಗಿವೆ. ಬಿ.ಎಲ್ ವೇಣು ಅವ್ರ ಲೇಖನಿ ಇರೋ ಬಿಚ್ಚುಗತ್ತಿ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ತುಂಬಾ ಪಾಸಿಟೀವ್ ಆಗಿ ಕಾಣ್ತಿದೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣದ ಬಿಚ್ಚುಗತ್ತಿ ಟ್ರೈಲರ್ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದ್ದು, ಇದೇ ತಿಂಗಳ 28ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.