ಹೊಸದುರ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ : ರಾಜ್ಯ ನಾಯಕರಿಗೆ ಗೂಳಿ ಗುಟುರು
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಬಿಜೆಪಿಯಲ್ಲಿ ಅಸಮದಾನ ಸ್ಪೋಟಗೊಂಡಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬೆಂಬಲಿಗರ ಸಭೆ ಮಾಡಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡಿದ್ದಾರೆ. 2008 ರಲ್ಲಿ ಬಿಎಸ್ವೈ ಸಿಎಂ ಸ್ಥಾನ ಕಳೆದುಕೊಳ್ಳಲು ಹೊಸದುರ್ಗ ಕಾರಣ. ಆಗ, ನನ್ನ ಮೇಲಿನ ಚಾಡಿ ಮಾತು ಕೇಳಿ ಅನುದಾನ ಕೊಟ್ಟಿರಲಿಲ್ಲ. ಈಗಲೂ ಇಲ್ಲಿ ಶಾಸಕರಾಗು ಆಸೆಯಿಂದ ಕೆಲವರು ಅಸ್ತಕ್ಷೇಪ ಮಾಡುತ್ತಿದ್ದಾರೆ. ರಾಜ್ಯದ ಮುಖಂಡರಿಗೆ ಚಾಡಿ ಹೇಳುತ್ತಿದ್ದಾರೆ.
ಇದೇ ಮುಂದುವರೆದರೆ ಪರಿಣಾಮ ದೊಡ್ಡದಾಗುತ್ತದೆ ಅಂತ ಶಾಸಕ ಗೂಳಿಹಟ್ಟಿ ಶೇಖರ್ ಜಿಲ್ಲಾಧ್ಯಕ್ಷ ಕೆಎಸ್ ನವಿನ್ ವಿರುದ್ದ ಪರೋಕ್ಷವಾಗಿ ಸಭೆಯಲ್ಲಿ ಗುಟುರು ಹಾಕಿದ್ದಾರೆ. ರಾಜ್ಯಾಧ್ಯಂತ ಬಿಜೆಪಿ ಪದಾಧಿಕಾರಿಗಳು, ಅಧ್ಯಕ್ಷರುಗಳ ನೇಮಕ ಪ್ರಕ್ರಿಯೆ ನಡಿಯುತ್ತಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಆ ಪ್ರಕ್ರಿಯೆ ನಡೆಯುತ್ತಿದೆ. ಹೊಸದುರ್ಗ ತಾಲ್ಲೂಕು ಅಧ್ಯಕ್ಷರ ನೇಮಕದಲ್ಲಿ ಜಿಲ್ಲಾ ಅಧ್ಯಕ್ಷ ಕೆಎಸ್ ನವೀನ್,ಹಾಗೂ ಶಾಸಕ ಗೂಳಿಹಟ್ಟಿ ಶೇಖರ್ ನಡುವಿ ಶೀತಲ ಸಮರ ಶುರುವಾಗಿದೆ. ತಾಲ್ಲೋಕು ಅಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲಾಧ್ಯಕ್ಷ ನವೀನ್ ಅಸ್ತಕ್ಷೇಪ ಮಾಡುತ್ತಿದ್ದಾರೆ.
ನಾನು ಮೊದಲು ಸೂಚಿಸಿದ ಎನ್.ಆರ್ ಜಗದೀಶನನ್ನ ಬೇಡ ಅಂತ ಡಿಲೀಟ್ ಮಾಡಿದ್ದು ಬೇರೆ ಹೆಸರು ಕೇಳಿದ್ದರು, ಆಗ ಗೂಳಿಹಟ್ಟಿ ಜಗದೀಶ್ ಹೆಸರು ಸೂಚಿಸಿದ್ದೆ ಆದರೆ ಅದನ್ನೂ ಬಿಟ್ಟು ಮತ್ತೆ ಎನ್.ಆರ್ ಜಗದೀಶ್ ವ್ಯಕ್ತಿಯ ಹೆಸರನ್ನ ಸೂಚಿಸಿದ್ದಾರೆ.ಇದಕ್ಕೆ ಜಿಲ್ಲಾಧ್ಯಕ್ಷ ಕೆಎಸ್ ನವೀನ್ ಕಾರಣ, ಅವರು ಮುಂದೆ ಇಲ್ಲಿ ತುರ್ತಾಗಿ ಶಾಸಕರಾಗಲು ರಾಜ್ಯದ ಮುಖಂಡರಿಗೆ ಚಾಡಿ ಹೇಳುತಿದ್ದಾರೆ, ಎಂದು ಪರೋಕ್ಷ ಆರೋಪ ಮಾಡಿ ಗುಟುರು ಹಾಕಿದ್ದಾರೆ.ಅಲ್ಲದೆ ಮುಂದಿನ ನಡೆ ಕುರಿತು ಸ್ವಾಭಿಮಾನಿ ಬಿಜೆಪಿ ಬೆಂಬಲಿಗರ ಹೆಸರಲ್ಲಿ ಕಾರ್ಯಕರ್ತರ ಸಭೆ ಮಾಡಿದ್ದಾರೆ.
ಹೊಸದುರ್ಗ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಶಾಸಕ ಗೂಳಿಹಟ್ಟಿ ಶೇಖರ್, ಅಧ್ಯಕ್ಷರ ವಿಚಾರದಲ್ಲಿ ನಾನು ಸೂಚಿಸಿದವರನ್ನ ಆಯ್ಕೆ ಮಾಡಿ ನನಗೆ ಅವಮಾನ ಆಗದಂತೆ ನಡೆಯಬೇಕು ಅಂತ ರಾಜ್ಯಾ ಹಾಗೂ ಜಿಲ್ಲಾ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೂಳಿಹಟ್ಟಿ ಶೇಖರ್, 2008ರಲ್ಲಿ ಬಿಎಸ್ವೈ ಸಿಎಂ ಸ್ಥಾನ ಕಳೆದುಕೊಳ್ಳಲು ಹೊಸದುರ್ಗ ಕಾರಣ.ಆಗ ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಕೇಳದೆ, ಮೊದಲು ನಾನೊಬ್ಬನೇ ಬೆಂಬಲ ನೀಡಿದ್ದೆ. ನಂತರ ನನ್ನ ಮೇಲೆಲಿನ ಚಾಡಿ ಮಾತು ಕೇಳಿ ಒಬ್ಬ ಎಸ್ಐ, ಕಾನ್ಸ್ಟೇಬಲ್ ಕೂಡಾ ವರ್ಗಾವಣೆ ಮಾಡಿಕೊಳ್ಳಲಾಗಲಿಲ್ಲ. ಅನುದಾನವನ್ನೂ ಕೊಡಲಿಲ್ಲ.ಆಗ ಮನಸ್ಸಿಗೆ ನೋವಾಗಿತ್ತು. ಅದರಿಂದ ಮುಖ್ಯಮಂತ್ರಿ ಬಿಎಸ್.ಯಡಯೂರಪ್ಪ ಅಧಿಕಾರ ಕಳೆದಕೊಂಡರು,ನನ್ನ ಅಧಿಕಾರವೂ ಹೋಯ್ತು. ಈಗಲೂ ಅದೇ ತರದ ಗೊಂದಲಗಳು ನಡೀತಿವೆ. ಅವು ಈಗಲೂ ಮತ್ತೆ ಮುಂದುವರೆದರೆ ಮುಂದೆ ಅದು ದೊಡ್ಡದಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗ ಹೊಸ ನೀರು ಬಂದಮೇಲೆ ಹಳೆ ನೀರು ಕೊಚ್ಚಿಕೊಂಡು ಹೋಗಬೇಕಲ್ಲ, ಎಂದು ತನ್ನನ್ನೆ ಹಳೆ ನೀರಿಗೆ ಹೋಲಿಸಿಕೊಂಡು, ಈಗ ಅದಿನೇಳುಜನ ಶಾಸಕರು ಇದ್ದಾರೆ ಎಂದಿದ್ದಾರೆ. ಈಗ ಬಂದಿರುವ ಅದಿನೇಳು ಜನ ಶಾಸಕರೂ ಹೇಮಾ ಹೇಮಿಗಳು, ಅವರ ಆಶಿರ್ವಾದದಿಂದ ಸರ್ಕಾರ ಬಂದಿದೆ ಬಿಎಸ್ವೈ ಸಿಎಂ ಆಗಿದ್ದಾರೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ತಾಲ್ಲೂಕು ಅಧ್ಯಕ್ಷರ ಆಯ್ಕೆ ಮಾಡಿ ಅಂತ ಮನವಿ ಮಾಡುತ್ತೇವೆ. ಕಡೆಗಣಿಸಿದರೆ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯ್ತ್ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳನ್ನ ಹಾಕುತ್ತೇವೆ.
ಸ್ವತಂತ್ರವಾಗಿಯೇ ಇರುತ್ತೇವೆ ಅಂತ ಬಾಂಬ್ ಸಿಡಿಸಿದ್ದಾರೆ. ಒಟ್ಟಾರೆ ಒಂದೇ ಒಂದು ತಾಲ್ಲೂಕು ಅಧ್ಯಕ್ಷರ ಆಯ್ಕೆಯಲ್ಲೆ ಜಿಲ್ಲಾಧ್ಯಕ್ಷ ಕೆಎಸ್ ನವೀನ್ ಹಾಗೂ ಗೂಳಿಹಟ್ಟಿ ಶೇಖರ್ ನಡುವಿನ ಅಸಮದಾನ ಸ್ಪೋಟಗೊಂಡಿದೆ. ನವೀನ್ ಹೊಸದುರ್ಗ ಶಾಸಕರಾಗುವ ಆಸೆಯಿಂದ ಅಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ಬಿಎಸ್ವೈ ಅಧಿಕಾರದ ಬಗ್ಗೆಯೂ ಪ್ರಸ್ಥಾಪ ಮಾಡಿ ಸರ್ಕಾರದ ಅಳಿವು ಉಳಿವುಗೆ ನಾನು ಕಾರಣ ಎಂಬ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮನವಿ ಈಡೇರದಿದ್ದರೆ ತಾಲ್ಲೂಕು,ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನ ನಿಲ್ಲಿಸುವುದಾಗಿ ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದ್ದು ಮುಂದೆ ರಾಜ್ಯ ನಾಯಕರ ತೀರ್ಮಾನಕ್ಕೆ ಕಾಯುತ್ತೇವೆ ಎಂದಿದ್ದಾರೆ.