ಹೊಸ ಎಣ್ಣೆ ಬ್ರಾಂಡ್ಗೆ ಪೂಜೆ…! : ಇಲ್ಲಿಯೂ ಕೇಳಿದ ‘ಹೌದು ಹುಲಿಯಾ’ ಸೌಂಡ್
ಹೊಸ ಎಣ್ಣೆ ಬ್ರಾಂಡ್ಗೆ ಪೂಜೆ ಮಾಡಿ ಬರಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ. ಇದಕ್ಕೆ ಪೂಜೆನಾ ಅಂಥ ಆಶ್ಚರ್ಯವಾದ್ರು ನಿಜಾನೇ..
ಮಾರುಕಟ್ಟೆಗೂ ಲಗ್ಗೆ ಇಡುವ ಮುನ್ನ ಕರ್ನಾಟಕ ರಾಜ್ಯ ಪಾನೀಯ ನಿಗಮ ಲಿಮಿಟೆಡ್ ಕೊಪ್ಪಳದಲ್ಲಿ ವಿಸ್ಕಿ ಬಾಕ್ಸ್ ಗಳಿಗೆ ಹೂವಿನ ಹಾರ ಹಾಕಿ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿದೆ. ಸದ್ಯ ವಿಸ್ಕಿ ಬಾಕ್ಸ್ ಗೆ ಪೂಜೆ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೇಳೆ ಸಿಕ್ಕಾಪಟ್ಟೆ ವೈರಲ್ ಆಗಿರುವ ‘ಹೌದು ಹುಲಿಯಾ’ ಸೌಂಡ್ ಇಲ್ಲಿಯೂ ಕೇಳಿಸಿತು. ಒಟ್ಟಾರೆ ಸರ್ಕಾರಿ ನಿಗಮಗಳಲ್ಲಿಯೂ ಹೊಸ ಬ್ರಾಂಡ್ ಎಣ್ಣೆಗೆ ಪೂಜೆ ಮಾಡಿರುವುದು ಇದೀಗ ಜಿಲ್ಲೆಯಲ್ಲಿ ಸಖತ್ ಹವಾ ಮಾಡುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ ‘ಹೌದು ಹುಲಿಯಾ’ ಎಂದಿದ್ದರು. ಆಗಿನಿಂದ ಕುಡುಕನ ‘ಹೌದು ಹುಲಿಯಾ’ ಡೈಲಾಗ್ ಸಖತ್ ಟ್ರೆಂಡ್ ಆಗಿದೆ.