BJP : ಮುನಿಸು ಶಮನಕ್ಕೆ ಮುಂದಾದ BSY – ವಿಜಯೇಂದ್ರ ದೂರ ಇಡಲು ಅತೃಪ್ತರ ಪಟ್ಟು..
ಹೈಕಮಾಂಡ್ನ ಸೂಚನೆ ಮೇರೆಗೆ ಪಕ್ಷದೊಳಗೆ ಮುನಿಸಿಕೊಂಡಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದೊಕೊಳ್ಳುವ ಕೆಲಸಕ್ಕೆ ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಖುದ್ದು ತಾವೇ ಅತೃಪ್ತರಿಗೆ ಕರೆ ಮಾಡಿ ಅವರ ಮೊರೆ ಆಲಿಸಲು ಬಿಎಸ್ವೈ ಮುಂದಾಗಿದ್ದು ಇದರ ಹಿಂದೆ ಹೈಕಮಾಂಡಿನ ಸ್ಪಷ್ಟ ಸೂಚನೆ ಇದೆ ಎನ್ನುತ್ತಿವೆ ಮೂಲಗಳು.
ಯಾವುದೇ ಕಾರಣಕ್ಕೂ ಬಿಎಸ್ವೈ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಹೈಕಮಾಂಡ್ ಇದೇ ವೇಳೆ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಹುವಂತೆ ಸಿಎಂಗೆ ಸೂಚಿಸಿದೆ ಎನ್ನಲಾಗಿದೆ.
ಅಭಿವೃದ್ಧ ಕಾರ್ಯ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಸಿಎಂ ಪುತ್ರ ವಿಜಯೇಂದ್ರ ಮುಗು ತೂರಿಸುತ್ತಿರುವುದೇ ಹಲವಾರು ಮುಖಂಡರ ಮುನಿಸಗೆ ಕಾರಣವಾಗಿದೆ.
ಈ ವಿಚಾರವನ್ನು ಅತೃಪ್ತರು ಯಡಿಯೂರಪ್ಪನವರ ಗಮನಕ್ಕೂ ತಂದಿದ್ದು, ವಿಜಯೇಂದ್ರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಆಗ್ರಹ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯೇಂದ್ರ ಸೇರಿ ಯಾರೂ ಕೂಡ ಆಡಳಿತದ ವಿಚಾರದಲ್ಲಿ ಮೂಗು ತೂರಿಸದಂತೆ ತಾವು ನೊಡಿಕೊಳ್ಳುವುದಾಗಿ ಬಿಎಸ್ವೈ ಅತೃಪ್ತರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.