OMG : ಆಹಾರ ಅರಸಿ ಡ್ಯಾಮ್ ಮೇಲೆ ಏರಿ‌ಬಂದ ಬೃಹತ್ ಮೊಸಳೆ…!

ಆಹಾರ ಅರಸಿ ಬೃಹತ್ ಮೊಸಳೆ ಡ್ಯಾಮ್ ಮೇಲೆ ಏರಿ‌ಬಂದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ನಾರಾಯಣಪುರ ಡ್ಯಾಮ್ ಬಳಿ ನಡೆದಿದೆ.

ಇಂದು ಬೆಳ್ಳಂ ಬೆಳಿಗ್ಗೆ  ನಾರಾಯಣಪುರ ಡ್ಯಾಮ್ ನೋಡಲು ಬಂದವರಿಗೆ ಒಂದು ದೊಡ್ಡ ಶಾಕ್ ಎದುರಾಗಿದೆ. ಆಹಾರ ಹುಡುಕಿಕೊಂಡು ಡ್ಯಾಮ್ ಮೇಲೆ ಏರಿ ಬಂದ ಮೊಸಳೆ ಕಂಡು ಜನ ಅಕ್ಷರಶ: ಬೆಚ್ಚಿಬಿದ್ದಿದ್ದಾರೆ. ತಕ್ಷಣಕ್ಕೆ ಅಲ್ಲೇ ಇದ್ದ  ವಿಜಯಪುರ ಮೀಸಲು ಪಡೆ ಪೊಲೀಸ್ ಸಿಬ್ಬಂದಿ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ.

ಬಿ.ಆರ್. ಲಮಾಣಿ, ರಾಮು ರಾಠೋಡ, ಪ್ರಕಾಶ ಜಾಧವ ಅವರಿಂದ ಮೊಸಳೆ ರಕ್ಷಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಯಾರಿಗೂ ಕೂಡ ಅಪಾಯವಾಗಿಲ್ಲ.  ಮೊಸಳೆಯನ್ನು ಹಿಡಿದ ಸಿಬ್ಬಂದಿ ಮರಳಿ ಮತ್ತೆ ನಾರಾಯಣಪುರ ಡ್ಯಾಮ್ ಗೆ ಬಿಟ್ಟಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights