ಬೆಳ್ಳಿ ಕಿರೀಟ ಕಳ್ಳನನ್ನು ಬೆನ್ನತ್ತಿ ಹಿಡಿದ ಗೋರ್ಖಾ ಶೇರ್ ಬಹಾದ್ದೂರ್…..
ಬೆಳ್ಳಿ ಕಿರೀಟ ಕಳ್ಳನನ್ನು ಗೋರ್ಖಾನೋರ್ವ ಬೆನ್ನತ್ತಿ ಹಿಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ದ್ಯಾಮವ್ವನ ಗುಡಿಯ 850 ಗ್ರಾಂ ತೂಕದ ಬೆಳ್ಳಿ ಕಿರೀಟ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕಳ್ಳ, ಸರೂರ ಹಾಲುಮತ ಗುರು ಪೀಠದ ರೇವಣ ಸಿದ್ದೇಶ್ವರ ಗಚ್ಚಿನ ಗುಡಿಯ ದೇವರ ಮೂರ್ತಿಯ ಕಿರೀಟ ಕಳ್ಳತನ ಮಾಡಿದ್ದ. ಕದ್ದುಕೊಂಡು ಮಧ್ಯರಾತ್ರಿ ಮುದ್ದೇಬಿಹಾಳ ಪಟ್ಟಣದ ಮೂಲಕ ಪರಾರಿಯಾಗುತ್ತಿದ್ದ. ಈ ಸಂದರ್ಭದಲ್ಲಿ ಗೋರ್ಖಾ- ಕಳ್ಳನ ಮಧ್ಯೆ ಜಟಾಪಟಿ ನಡೆದಿದೆ.
ಕಳ್ಳನನ್ನು ಬೆನ್ನಟ್ಟಿ ಕಿರೀಟ ಕಸಿದುಕೊಂಡ ಗೋರ್ಖಾ ಶೇರ್ ಬಹಾದ್ದೂರ್ ಸಾಹಸ ಮೆಚ್ಚಿದ ಜನ ಸನ್ಮಾನ ಮಾಡಿದ್ದಾರೆ.