ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಹೆಗಲೇರಿದ ವರ್ಮಾ: ಆರ್‌ಜಿವಿ ಮೇಲೆ ಸಿಟ್ಟಾದ ಪಿಕೆ ಅಭಿಮಾನಿಗಳು

ಒಂದು ಮೊಬೈಲ್ ಇದ್ದರೆ ಸಾಕು ನಾನು ಸಿನೆಮಾ ಮಾಡುತ್ತೇನೆ, ಸಿನೆಮಾ ಮಾಡಲು ಧೈರ್ಯ ಬೇಕಿಲ್ಲ ಹುಚ್ಚು ಇರಬೇಕು ಎನ್ನುವ ನಿರ್ದೇಶಕ ರಾಮ ಗೋಪಾಲ್ ವರ್ಮ ಅವರು ಪವನ್ ಕಲ್ಯಾಣ್‌ ಬಗ್ಗೆ ಹೊಸ ಸಿನೆಮಾ ಮಾಡುವುದಾಗಿ ಘೋಷಿಸಿದ್ದು, ಕಲ್ಯಾಣ್ ಅವರ ಹೆಗಲೇರಿದ ವರ್ಮಾ ಎಂದು ಮತ್ತೆ ಚೆರ್ಚೆಯಲ್ಲಿದ್ದಾರೆ.

ತನ್ನ ತಿಕ್ಕಲುತನದಿಂದ ಮಾರ್ಕೆಟ್ ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಸದಾ ಇರುತ್ತಾರೆ. ಇದೇ ರೀತಿ ಕೊರೊನಾ ಸಮಯದಲ್ಲೂ ಬಿಡುವಿಲ್ಲದಂತೆ ಸಿನೆಮಾಗಳನ್ನು ತೆಗೆದು ತಮ್ಮ ವೆಬ್ ಸೈಟ್‍ನಲ್ಲಿ ಬಿಡುಗಡೆ ಮಾಡಿದ್ದರು. ನೇಕೇಡ್ ಮತ್ತು ಕ್ಲೈಮಾಕ್ಸ್ ಎಂಬ  ಸಿನೆಮಾಗಳು ತನ್ನ ವೆಬ್ ಸೈಟ್‍ನಲ್ಲೆ ದುಡ್ಡು ಮಾಡಿವೆ ಎಂದು ಸಹ ಹೇಳಿಕೊಂಡಿದ್ದರು.

ಮೊನ್ನೆ ತಾನೆ ತೆಲಂಗಾಣದಲ್ಲಿ ನಡೆದ ಭೀಕರ ಮರ್ಯಾದಾ ಹತ್ಯೆಯ ರೂವಾರಿ ಮಾರುತಿರಾವ್ ಹಾಗೂ ಹತ್ಯೆಗೆ ಬಲಿಯಾದ ಪ್ರಣಯ್ ನನ್ನು ಕಳೆದುಕೊಂಡ ಅಮೃತರ ಕುರಿತು ಸಿನೆಮಾ ಮಾಡುವುದಾಗಿ ಘೋಷಿಸಿ ಕೇಸ್ ಹಾಕಿಸಿಕೊಂಡಿದ್ದಾರೆ.  ಈಗ ತೆಲುಗು ನಟ ಪವನ್ ಕಲ್ಯಾಣ್ ಬಗ್ಗೆ ಸಿನೆಮಾ ಮಾಡುವ ಸಿದ್ದತೆಯಲ್ಲಿದ್ದು ಹೊಸ ಪೋಸ್ಟರ್ ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

Pawan Kalyan to quit acting? Power Star says he's not interested ...

ತನ್ನ ಹೊಸ ಸಿನೆಮಾಗೆ ಪವರ್ ಸ್ಟಾರ್ ಎಂಬ ಹೆಸರಿಟ್ಟಿದ್ದು, ಚುನಾವಣೆಯ ನಂತರ ಎಂದು ಉಪ ಶೀರ್ಷಿಕೆ ಕೊಟ್ಟಿದ್ದಾರೆ. ಇದು ತೆಲುಗಿನ ಸ್ಟಾರ್‌ ನಟನನ್ನು ವ್ಯಂಗ್ಯ ಮಾಡಿದಂತಿದೆ. ಪವನ್ ಕಲ್ಯಾಣ್ ತೆಲುಗು ಸಿನೆಮಾ ನಟ ಈತ ತನ್ನ ವರ್ಣ ರಂಜಿತ ಬದುಕಿನಿಂದ ಹಾಗೂ ಹುಚ್ಚುತನದಿಂದ ತೆಲುಗು ರಾಜ್ಯಗಳಲ್ಲಿ ಪ್ರಖ್ಯಾತಿ ಗಳಿಸಿದ್ದಾನೆ.

ಮೆಗಾಸ್ಟಾರ್ ಚಿರಂಜೀವಿಯ ತಮ್ಮನೆನ್ನುವ ಕಾರಣಕ್ಕೆ ಅತಿ ಬೇಗ ನಟನಾಗಿ ಬೆಳೆದ ಮತ್ತು ಅವರು ಕುಟುಂಬದ ಜೊತೆಗೂ ಹಲವಾರು ಜಗಳಗಳನ್ನು ಮಾಡಿಕೊಂಡಿದ್ದ.  ಕಳೆದ ಸಾರ್ವತ್ರಿಕ  ಚುನಾವಣೆಯಲ್ಲಿ ಆತ ಜನಸೇನ ಎಂಬ ಪಕ್ಷವನ್ನು ಕಟ್ಟಿ ಕಮ್ಯೂನಿಷ್ಟ್ ಪಕ್ಷಗಳು ಮತ್ತ ಬಿಎಸ್‍ಪಿ ಜೊತೆ ಸೇರಿ  ಚುನಾವಣೆಗೆ ನಿಂತು ಸೋತು ಹೋದ.

ಆನಂತರ  ಅಮಿತ್ ಷಾ ಜೊತೆ ಮಾತುಕತೆ ನಡೆಸಿ ಬಿಜೆಪಿ ಬೆಂಗಲಿಗನಾಗಿ  ಆಂಧ್ರಪ್ರದೇಶದಲ್ಲಿ ಅಧಿಕಾರ ಹಿಡಿಯಬೇಕೆಂದು ಹಂಭಲಿಸುತ್ತಿದ್ದಾರೆ . ಅಪಾರ ಅಭಿಮಾನಿಗಳನ್ನು ಇಟ್ಟುಕೊಂಡಿರುವ ಈತನನ್ನು ಈಗ ತನ್ನ ಸಿನೆಮಾದ ಪ್ರಚಾರದ ಸರಕಿಗಾಗಿ ವರ್ಮಾ ಟಾರ್ಗೇಟ್ ಮಾಡಿದ್ದಾರೆ.

ಇತ್ತಿಚಿಗೆ ಪವನ್ ಕಲ್ಯಾಣನನ್ನೆ ಹೋಲುವ ವ್ಯಕ್ತಿಯನ್ನು ಈ ಪೋಸ್ಟರನಲ್ಲಿ ಬಳಸಿದ್ದು ಆತನ ಅಣ್ಣ ಚಿತ್ರನಟ ಚಿರಂಜೀವಿ ಜೊತೆ ಕೂತು ಮಾತನಾಡುತ್ತಿರುವ ದೃಶ್ಯದ ಚಿತ್ರಿಕರಣದ ಪೋಟೋಗಳನ್ನು ತಮ್ಮ ಪೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮುಂಚೆ ಪವನ್ ಕಲ್ಯಾಣ್ ಹೋಲುವ ವ್ಯಕ್ತಿಯ ವಿಡಿಯೋ ಒಂದನ್ನು ಹಾಕಿಕೊಂಡು ಪವನ್ ಕಲ್ಯಾಣ್ ನಮ್ಮ ಕಛೇರಿಗೆ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

ಈಗ ಪವರ್ ಸ್ಟಾರ್ ಸಿನೆಮಾ ಮಾಡುವುದಾಗಿ ಘೋಷಿಸುವ  ಮೂಲಕ ಪವನ್ ಅಭಿಮಾನಿಗಳ ಆಕ್ರೋಷಕ್ಕೆ ಕಾರಣವಾಗಿದ್ದಾರೆ. ಚುನಾವಣ ಸಮಯದಲ್ಲಿಯೂ ಸಹ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು , ಜಗನ್, ಎಲ್ಲಾ ಪಾತ್ರಗಳನ್ನು ಇಟ್ಟುಕೊಂಡು ‘ಅಮ್ಮ ರಾಜ್ಯಮಲೋ ಕಡಪ ರೆಡ್ಲು ಅನ್ನೋ ಸಿನೆಮಾ ಮಾಡಿ ವಿವಾದ ಸೃಷ್ಟಿಸಿದ್ದರು. ಈಗ ಪವನ್ ಕಲ್ಯಾಣ್‍ನ ಕೌಟುಂಬಿಕ ಹಿನ್ನಲೆ ಆತನ ವಿಚ್ಚೇದನ ನೀಡಿದ ಹೆಂಡತಿಯರು ಎಲ್ಲಾ ಪಾತ್ರಗಳನ್ನು ತೆರೆಯ ಮೇಲೆ ತರುವ ಪ್ರಯತ್ನದಲ್ಲಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಪ್ರತಿ ಭಾರಿ ನೈಜ ಘಟನೆಗಳ ಆಧಾರವಾಗಿ ತನ್ನದೇ ಶೈಲಿಯಲ್ಲಿ ಸಿನೆಮಾ ಮಾಡುವ ವರ್ಮ ಈ ಭಾರಿಯೂ  ಈ ಸಿನೆಮಾ ಯಾರನ್ನು ಉದ್ದೇಶಿಸಿಲ್ಲ ಆ ರೀತಿ ಕಂಡರೆ ಕಾಕತಾಳೀಯ ಎನ್ನುವ ರಾಮ್ ಗೋಪಾಲ್ ವರ್ಮ ಮತ್ತೆ ಅದನ್ನೆ ಪುನರುಚ್ಚರಿಸಿದ್ದಾರೆ.  ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ಆರ್.ಜಿ.ವಿ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ‘ಮರ್ಡರ್’: ಪ್ರೀತಿ ಕೊಂದ ಜಾತಿಯ ಕ್ರೌರ್ಯ ಬಿಚ್ಚಿಡುತ್ತಾರಾ ಆರ್‌ಜಿವಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights