ಭಾರತೀಯರ ಮೇಲೆ ನೇಪಾಳ ಪೊಲೀಸರ ದಾಳಿ; ಒಬ್ಬನಿಗೆ ಗುಂಡೇಟು!
ಬಿಹಾರದ ರಾಜ್ಯದಲ್ಲಿರುವ ಭಾರತ – ನೇಪಾಳ ಗಡಿ ಭಾಗ ಕಿಸಾನ್ ಗಂಜ್ನಲ್ಲಿ ಭಾರತೀಯರ ಮೇಲೆ ನೇಪಾಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ರೈತರೊಬ್ಬರು ಗಾಯಗೊಂಡಿದ್ದಾರೆ.
ಮೂವರು ಭಾರತೀಯರ ಮೇಲೆ ನೇಪಾಳ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಮೂವರಲ್ಲಿ ಒಬ್ಬರಿಗೆ ಗುಂಡು ತಗುಲಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಆತನನ್ನು ಜೀತೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ನೇಪಾಳ ಪೊಲಿಸರು ಗುಂಡಿದಾಳಗೆ ಗುರಿಯಾದ ಜೀತೇಂದ್ರ ಕುಮಾರ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಶನ್ ಗಂಝ್ ಎಸ್ ಪಿ ಕುಮಾರ್ ಆಶೀಷ್ ತಿಳಿಸಿದ್ದಾರೆ.
One Indian injured after Nepal Police shot at three Indian men near India-Nepal border in Kishanganj. Injured shifted to hospital. Investigation underway: SP Kishanganj, Bihar
— ANI (@ANI) July 19, 2020
ಈ ಹಿಂದೆಯೂ ನೇಪಾಳ ಪೋಲೀಸರು ಭಾರತೀಯ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಓರ್ವ ರೈತ ಮೃತಪಟ್ಟಿದ್ದರು. ಎಂದು ತಿಳಿದುಬಂದಿದೆ.