ಚೀನಾ ಅತಿಕ್ರಮಿಸಿರುವ ಭೂಮಿಯನ್ನು ಹಿಂಪಡೆಯುವಿರೋ ಅಥವಾ ದೇವರ ಅಟ ಎಂದು ಸುಮ್ಮನಾಗುವಿರೋ?: ರಾಹುಲ್ಗಾಂಧಿ
ಚೀನಾ ಅತಿಕ್ರಮಣ ಮಾಡಿರುವ ಭಾರತದ ಗಡಿ ಭಾಗದ ಭೂಮಿಯನ್ನು ಹಿಂಪಡೆಯುವಿರಾ ಅಥವಾ ಅಥವಾ ‘ದೇವರ ಆಟ’ ಎಂದು ಅದನ್ನೂ ಬಿಟ್ಟುಬಿಡುವಿರಾ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಾನಸ ಸರೋವರದ ಬಳಿ ಕ್ಷಿಪಣಿಗಳನ್ನು ನಿರ್ಮಾಣ ಮಾಡಿರುವ ಚೀನಾ, ಪಾಂಗೋಂಗ್ ಸರೋವರದ ಬಳಿ ಕಳೆದ ವಾರ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ನುಸುಳಲು ಪ್ರಯತ್ನಿಸಿತ್ತು. ಈ ಬಗ್ಗೆ ಪ್ರಶ್ನಿಸಿರುವ ರಾಹುಲ್ಗಾಂಧಿ, “ಚೀನಿ ಸೈನಿಕರು ನಮ್ಮ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಅದನ್ನು ಮರಳಿ ಪಡೆಯಲು ಭಾರತ ಸರ್ಕಾರ ಯೋಜನೆಗಳನ್ನು ರೂಪಿಸಿ ಏನಾದರೂ ತಯಾರಿ ನಡೆಸಿದೆಯೇ? ಅಥವಾ ಇದನ್ನೂ’ ದೇವರ ಆಟ’ ಎಂದು ಕೈಬಿಡುತ್ತೀರಾ?” ಎಂದು ಟ್ವೀಟ್ ಮಾಡಿದ್ದಾರೆ.
The Chinese have taken our land.
When exactly is GOI planning to get it back?
Or is that also going to be left to an 'Act of God'?
— Rahul Gandhi (@RahulGandhi) September 11, 2020
ಪೂರ್ವ ಲಡಾಕ್ನಲ್ಲಿ ತನ್ನ ಗಡಿಯನ್ನು ದಾಟಲು ಯತ್ನಿಸುತ್ತಿರುವ ಚೀನೀ ಸೈನ್ಯ ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿದು ಬಂದಿದೆ. 45 ವರ್ಷಗಳ ನಂತರ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಸೇನೆ ಶಸ್ತ್ರ ಸಜ್ಜಿತವಾಗಿ ಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಲಡಾಖ್ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಬಳಿಯ ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಲು ಚೀನಾದ ಸೈನಿಕರು ಮಾಡಿದ ಪ್ರಯತ್ನವನ್ನುಇದರ ಮೂಲಕ ತಡೆಹಿಡಿಯಲಾಗಿದೆ.
ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ನಡೆಸಿದ ಘರ್ಷಣೆಯಲ್ಲಿ ಭಾರತವು ಇಪತ್ತಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ.
ಇದನ್ನೂ ಓದಿ: ಶಸ್ತ್ರಾಸ್ತ್ರಗಳೊಂದಿಗೆ ಭಾರತೀಯ ಗಡಿ ಪ್ರವೇಶಿಸಿದ ಚೀನಾ: ಉದ್ದಟತನವೆಂದ ಭಾರತ