Video: ತೆಂಗಿನಮರದ ಮೇಲೇರಿ ಸುದ್ದಿಗೋಷ್ಠಿ ನಡೆಸಿದ ತೆಂಗು ಸಚಿವ!
ತೆಂಗಿನ ಸಚಿವರೊಬ್ಬರು ತೆಂಗಿನ ಮರವೇರಿ ಸುದ್ದಿಗೋಷ್ಟಿ ನಡೆಸಿರುವ ಅಚ್ಚರಿಯ ಪತ್ರಿಕಾಗೋಷ್ಟಿ ಶ್ರೀಲಂಕಾದಲ್ಲಿ ನಡೆದಿದೆ.
ಇತ್ತೀಚೆಗಿನ ದಿನಗಳಲ್ಲಿ ಕೃಷಿ ಸಚಿವರು ಗದ್ದೆ-ತೋಟದಲ್ಲಿ, ಪಶು ಸಂಗೋಪನೆ ಸಚಿವರು ದನದ ಕೊಟ್ಟಿಗೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉದಾಹರಣೆಗಳಿವೆ. ಅದೇ ರೀತಿ ಶ್ರೀಲಂಕಾದ ತೆಂಗು ಸಚಿವರು ತೆಂಗಿನಮರವೇರಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಶ್ರೀಲಂಕಾದ ತೆಂಗು ಸಚಿವ ಅರುಂಧಿಕಾ ಫರ್ನಾಂಡೊ ಅವರು ಶ್ರೀಲಂಕಾದ ಡಂಕೋಟುವಾದಲ್ಲಿರುವ ತಮ್ಮ ತೋಟದಲ್ಲಿ ಸೆಪ್ಟೆಂಬರ್ 18ರಂದು ಸುದ್ದಿಗೋಷ್ಠಿ ಕರೆದಿದ್ದರು. ಮಾಧ್ಯಮದವರು ಅಲ್ಲಿಗೆ ಹೋದಾಗ, ಅರುಂಧಿಕಾ ಫರ್ನಾಂಡೊ ಯಂತ್ರದ ಮೂಲಕ ತೆಂಗಿನ ಮರ ಏರಿ, ಅಲ್ಲಿಂದಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಶ್ರೀಲಂಕಾದಲ್ಲಿ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಇದೆ. ಈ ಕಾರಣದಿಂದಾಗಿ ತೆಂಗಿನಬೆಲೆ ಏರುತ್ತಲೇ ಇದೆ. ಅಲ್ಲದೆ, ಮರ ಏರಿ ತೆಂಗಿನ ಕಾಯಿ ಕೆಡಗುವ ಯಂತ್ರವನ್ನು ಪರಿಶೀಲಿಸಿದ್ದೇನೆ. ಅವು ಕಳಪೆಯಾಗಿದ್ದು, ಉತ್ತಮ ಗುಣಮಟ್ಟದ ಯಂತ್ರವನ್ನು ಪರಿಚಯಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ತೆಂಗು ಸಚಿವರು ಮರ ಏರಿ ಪತ್ರಿಕಾಗೋಷ್ಠಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ಯುಪಿಯಲ್ಲಿ ದೇಶದ ಅತ್ಯಂತ ಸುಂದರವಾದ ಚಲನಚಿತ್ರ ನಗರ ನಿರ್ಮಾಣ’-ಯೋಗಿ
Wonderful goods from you, man. I have be aware your stuff prior to and you are just too wonderful.
I really like what you have obtained here, really like what you are saying and the
best way wherein you assert it. You make it entertaining and you still care for to
stay it sensible. I can’t wait to read far more from you.
That is actually a great website.