ಇಂದು/ನಾಳೆ ಜ್ಯೂನಿಯರ್ ಚಿರು ಆಗಮನದ ಸಾಧ್ಯತೆ : ಮೇಘನಾ ರಾಜ್ ಆಸ್ಪತ್ರೆಗೆ ದಾಖಲು!

ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಮೇಘನಾ ರಾಜ್ ಇಂದು ದಾಖಲಾಗಿದ್ದಾರೆ. ಇಂದು ಅಥವಾ ನಾಳೆ ಡೆಲಿವರಿಯಾಗುವ ಸಾಧ್ಯತೆ ಇದೆ ಇಂದು ಕುಟುಂಬದ ಮೂಲಗಳು ತಿಳಿಸಿವೆ. ಮತ್ತೊಮ್ಮೆ ಚಿರಂಜೀವಿ ಹುಟ್ಟಿ ಬರುವ ಸಾಧ್ಯೆತೆ ಇದೆ.

ಸ್ಯಾಂಟಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಹೊಂದಿದ್ದರು. ಅಷ್ಟರಲ್ಲೇ ಕಿರು ಕುಡಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು.ಇನ್ನೂ ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ಸೀಮಂತ ಶಾಸ್ತ್ರ ಕಾರ್ಯಕ್ರಮ ಸಹ ನಡೆದಿತ್ತು.

ದಿವಂಗತ ಚಿರಜೀವಿ ಸರ್ಜಾ ಅವರ ಮಗುವಿಗಾಗಿ ನಟ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಮತ್ತು ಚಿನ್ನದ ಬಟ್ಟಲನ್ನು ಖರೀದಿಸಿದ್ದಾರೆ. ಇನ್ನು ಇಡೀ ಕುಟುಂಬ ಜೂನಿಯರ್ ಚಿರುಗೆ ಸ್ವಾಗತ ಕೋರಲು ಸಿದ್ಧರಾಗಿದ್ದಾರೆ.

ಜೂನಿಯರ್ ಚಿರು ಆಗಮನಕ್ಕೂ ಮುನ್ನವೇ ಧ್ರುವ ಸರ್ಜಾ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಮತ್ತು ಚಿನ್ನದ ಬಟ್ಟಲನ್ನು ಖರೀದಿಸಿದ್ದಾರೆ.ಅಕ್ಟೋಬರ್ 4ರಂದು ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು. ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights