10 ಲಕ್ಷ ರೂ. ಕಾಮಗಾರಿ ಮುಂಜೂರಾತಿಗೆ 1.5 ಲಕ್ಷ ಲಂಚ: ಇಬ್ಬರು ಅಧಿಕಾರಿಗಳ ಬಂಧನ!
ಲೋಕೋಪಯೋಗಿ ಇಲಾಖೆಯ (PWD) ಅಡಿಯಲ್ಲಿ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗಾಗಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಗೆ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆ ಮಾಡಲು ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಬೆಂಗಳೂರಿನ ಜಯನಗರದ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಿಶೋರ್ ಮತ್ತು ಅಕೌಂಟ್ಸ್ ಸೂಪರಿಟೆಂಡೆಂಟ್ ದತ್ತಾತ್ರೇಯ ಬಂಧಿತರಾಗಿದ್ದಾರೆ.
ವೆಂಕಟೇಶ್ ಎಂಬುವವರು ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರಾಗಿದ್ದಾರೆ. ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ತರುವಾಯ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆಯಾಗಬೇಕಿತ್ತು. ಈ ಹಣ ಬಿಡುಗಡೆ ಮಾಡಲು ಬಂಧಿತರು ರೂ.3.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ. ಲಂಚ ನೀಡಲು ಇಷ್ಟವಿಲ್ಲದಿರುವ ಕಾರಣ ಎಸಿಬಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಮಲ್ಯ ಹಸ್ತಾಂತರ: 06 ವಾರಗಳಲ್ಲಿ ಸ್ಥಿತಿ ವರದಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ!