ಸಂಜೆ ದರ್ಪಣ ಪತ್ರಿಕೆ ಸಂಪಾದಕ ಪ್ರಸನ್ನ ಕುಮಾರ್‌ಗೆ ಕೊರೊನಾ ವಾರಿಯರ್ಸ್‌ ಪ್ರಶಸ್ತಿ!

ಹುಬ್ಬಳ್ಳಿಯ ಸಂಜೆ ದರ್ಪಣ ಪತ್ರಿಕೆ ಸುದ್ದಿ ಸಂಪಾದಕ ಪ್ರಸನ್ನ ಕುಮಾರ್ ಅವರಿಗೆ ಕೊರೊನಾ ವಾರಿಯರ್ಸ್‌ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಹುಬ್ಬಳ್ಳಿ ಮಂತ್ರಾ ರೆಸಿಡೆನ್ಸಿಯ ರೇಷ್ಮಾ ಫರ್ನಾಂಡಿಸ್ ನೇತೃತ್ವದಲ್ಲಿ ಸ್ಮೃತಿ ಸಾಧನಾ, ಹುಬ್ಬಳ್ಳಿ ರೌಂಡ್ ಟೇಬಲ್ ೩೭ ಮತ್ತು ಹುಬ್ಬಳ್ಳಿ ಲೇಡಿಸ್ ಸರ್ಕಲ್ ೪೫ ಸಹಯೋಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸಂಜೆ ದರ್ಪಣ ಪತ್ರಿಕೆ ಸುದ್ದಿ ಸಂಪಾದಕ ಪ್ರಸನ್ನಕುಮಾರ ಅವರು ಲಾಕ್‌ಡೌನ್‌ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಅರಿವು ಮೂಢಿಸುವ ಮತ್ತು ಹಲವರಿಗೆ ಸಹಾಯಾಸ್ತ ಚಾಚಿದ್ದರು. ಈ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮಗಳನ್ನು ಕಂಡು ಪ್ರಶಸ್ತಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಸಿಇಒ ಸಂಸ್ಥಾಪಕ ಶಿವಕುಮಾರ್, ರೇಷ್ಮಾ ಫರ್ನಾಂಡಿಸ್, ರೌಂಡ್ ಟೇಬಲ್ ೩೭ ರ ಅಧ್ಯಕ್ಷ ಹಿಮಾಂಶು ಕೊಠಾರಿ, ಹುಬ್ಬಳ್ಳಿ ಲೇಡಿಸ್ ಸರ್ಕಲ್ ೪೫ ರ ಅಧ್ಯಕ್ಷೆ ಮಾನಸಿ ಕೊಠಾರಿ, ಅತಿಥಿಗಳಾಗಿ ಡಾ.ಬಸವರಾಜ ಪಾಟೀಲ, ಡಾ.ಸಚಿನ ಹೊಸಕಟ್ಟಿ, ಡಾ.ರಾಮಚಂದ್ರ ಕಾರಟಗಿ ಇದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights