ಅಮಿತ್ ಶಾ ಸ್ಟಾರ್ ಹೋಟೆಲ್ನಲ್ಲಿ ಊಟ ತಿಂದು; ತೋರಿಕೆಗೆ ಬುಡಕಟ್ಟು ಕಾರ್ಯಕ್ರಮ ಮಾಡಿದ್ದಾರೆ: ಮಮತಾ ಬ್ಯಾನರ್ಜಿ
ಕೇಂದ್ರ ಗೈಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಮಾಡಿರುವುದು ಕೇವಲ ತೋರಿಕೆಗಷ್ಟೇ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಮಿತ್ ಶಾ ಅವರದ್ದು ಕೇವಲ ತೋರಿಕೆಯ ಕಾರ್ಯಕ್ರಮವಷ್ಟೇ, ಬುಡಕಟ್ಟು ಮನೆಗಳಿಗೆ ಭೇಟಿ ನೀಡಿದ ಅವರಿಗೆ ಆಹಾರವನ್ನು ಪಂಚತಾರಾ ಹೋಟೆಲ್ ನಿಂದ ತರಿಸಲಾಗಿತ್ತು. ಸ್ಟಾರ್ ಹೋಟೆಲ್ನಿಂದ ಊಟ ತರಿಸಿ ತಿಂದು ಬುಡಕಟ್ಟು ಕಾರ್ಯಕ್ರಮ ಮಾಡುವುದು ಚುನಾವಣೆಗಾಗಿನ ತೋರಿಕೆಯಷ್ಟೇ ಎಂದು ಆರೋಪಿಸಿದ್ದಾರೆ.
ಬುಡಕಟ್ಟು ಯೋಧನೊಬ್ಬನ ಪ್ರತಿಮೆಯನ್ನು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಪುತ್ಥಳಿ ಎಂದು ಹೇಳಿದ್ದಾರೆ. ಇತಿಹಾಸವನ್ನೂ ಸರಿಯಾಗಿ ಓದಿಕೊಳ್ಳದ ಅಮಿತ್ ಶಾ ಬುಡಕಟ್ಟು ಜನಾಂಗದ ಜನರನ್ನು ಸೆಳೆಯುವ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಟೀಕೆಗೆ ಪ್ರತಿಕ್ರಿಸಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಅವರು ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.
ಇದನ್ನೂ ಓದಿ: ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?