ವಿಧಾನಸಭೆ ಕಲಾಪ ಬಹಿಷ್ಕರಿಸಿರುವ ವಿರೋಧ ಪಕ್ಷಗಳು; ಏಕಪಕ್ಷೀಯವಾಗಿ ನಡೆಯುತ್ತಿದೆ ಅಧಿವೇಶನ!
ಬುಧವಾರ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಯಾವುದೇ ಮುನ್ಸೂಚನೆ, ಮಾಹಿತಿಯನ್ನೂ ನೀಡದೇ ಏಕ ಪಕ್ಷೀಯವಾಗಿ ಮಂಡಿಸಿ, ಚರ್ಚೆಗೂ ಅವಕಾಶ ಕೊಡದೇ ಆಡಳಿತಾರೂಢ ಬಿಜೆಪಿ ಅಂಗೀಕರಿಸಿದೆ. ಸರ್ಕಾರದ ನಡೆ ಪ್ರಜಾಪ್ರಭುತ್ವ ವಿರೋಧವಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು (ಕಾಂಗ್ರೆಸ್ ಮತ್ತು ಜೆಡಿಎಸ್) ಇಂದಿನ (ಗುರುವಾರ) ಕಲಾಪವನ್ನು ಬಹಿಷ್ಕರಿಸಿದ್ದು, ವಿರೋಧ ಪಕ್ಷದ ನಾಯಕರೂ ಸೇರಿದಂತೆ ವಿಪಕ್ಷಗಳ ಸದಸ್ಯರೊಬ್ಬರೂ ಇಲ್ಲದೆ ಇಂದು ಅಧಿವೇಶನ ಏಕಪಕ್ಷೀಯವಾಗಿ ನಡೆಯುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಉಲ್ಲಂಘಿಸಿ ಸಂವಿಧಾನ ವಿರೋಧಿಯಾಗಿ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂ ಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪ ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದು, ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿವೆ.
ಬಿಲ್ ಮಂಡಿಸುವ ಯಾವ ನಿಯಮವನ್ನೂ ಪಾಲನೆ ಮಾಡಿಲ್ಲ.ಹಾಗಾಗಿ ನಾವು ಇಂದಿನ ಕಲಾಪ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ. ಇಂದು ನಡೆಯುತ್ತಿರುವ ಅಲ್ಲಾ ಚರ್ಚೆಗಳಿಂದ ದೂರ ಉಳಿಯಲಿದ್ದೇವೆ. ಗ್ರಾಮೀಣ ಜನರ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಲು ಸರ್ಕಾರ ಮುಂದಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯವೇಳೆ ಬಿಲ್ ತಂದಿದ್ದು, ಇದರ ಪರಿಣಾಮ ಏನಾಗಲಿದೆ. ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಇದು ಬರುತ್ತದೆಯೇ ಇಲ್ಲವೇ ಎಂಬುದರ ಅರಿವು ಅವರಿಗಿಲ್ಲ. ಹೀಗಿರುವಾಗ ನೀತಿ ಸಂಹಿತಿ ಯಾಕೆ ಬೇಕು? ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರ ಪ್ರತಿಪಕ್ಷದ ಸದಸ್ಯರನ್ನು ಕತ್ತಲಲ್ಲಿರಿಸಿದೆ. ಇದು ‘ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಧೋರಣೆ ಸಿದ್ದರಾಮಯ್ಯ ಹೇಳಿದರು,
ವಯಸ್ಸಾದ ಹಸು,ಗೊಡ್ಡು ರಾಸುಗಳನ್ನು ಆರ್ ಎಸ್ಎಸ್ ನವರು ಬಂದು ಸಾಕುತ್ತಾರಾ? ರೈತರು ರಾಸುಗಳ ಸಾಕಾಣಿಕೆ ಮಾಡುತ್ತಾರೆಯೋ ಹೊರತು ಆರ್ಎಸ್ಎಸ್ ಬಿಜೆಪಿ ಅವರಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ವಿಧಾನಸಭೆಯಲ್ಲಿ ಚರ್ಚೆಗೆ ತರದೇ ಅಂಗೀಕರಿಸಿದ ಬಿಜೆಪಿ ಸರ್ಕಾರ!