ಧರ್ಮೇಗೌಡರ ಸಾವಿಗೆ ವಿಧಾನ ಪರಿಷತ್‌ನ MLCಗಳು ಕಾರಣ; ಎಲ್ಲರನ್ನೂ ಬಂಧಿಸಿ: ಎಎಪಿ ಆಗ್ರಹ

ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವದಿಂದ ಮತ್ತೊಂದು ದುರ್ಘಟನೆ ನಡೆದಿದ್ದು ಉಪ ಸಭಾಪತಿ ಧರ್ಮೇಗೌಡ ಅವರು ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಎಲ್ಲಾ ಸದಸ್ಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣ. ಈ ಕೂಡಲೇ ಎಲ್ಲಾ ಸದಸ್ಯರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.

ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಭಾಪತಿ ಸ್ಥಾನಕ್ಕೆ ನಡೆದ ಜಟಾಪಟಿಯನ್ನು ಇಡೀ ರಾಜ್ಯದ ಜನ ಮಾಧ್ಯಮಗಳ ಮೂಲಕ ನೋಡಿದ್ದಾರೆ. ಈ ಜಟಾಪಟಿ ವೇಳೆ ಉಪಸಭಾಪತಿ ಧರ್ಮೇಗೌಡರನ್ನು ಅನೇಕ ಸದಸ್ಯರು ಎಳೆದಾಡಿದ್ದರು, ಇದಕ್ಕೆ ಸಾಕಷ್ಟು ವಿಡಿಯೋ ದಾಖಲೆಗಳಿವೆ, ಫೋಟೋಗಳಿವೆ. ಈ ವೇಳೆ ಸೂಕ್ಷ್ಮ ಮನಸ್ಸಿನ ಧರ್ಮೇಗೌಡರಿಗೆ ಘಾಸಿಯಾಗಿ ಈ ದುರ್ಘಟನೆ ನಡೆದಿದೆ, ಇತರೇ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರನ್ನು ಬಂಧಿಸುವ ಪೊಲೀಸರು ಈಗ ಏಕೆ ಮೌನವಾಗಿದ್ದಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಿ ಎಂದರು.

ಇದನ್ನೂ ಓದಿ: 3 ಪಕ್ಷಗಳ ರಾಜಕೀಯಕ್ಕೆ ಬಲಿಯಾದ್ರಾ ಉಪಸಭಾಪತಿ; ಧರ್ಮೇಗೌಡರ ಆತ್ಮಹತ್ಯಾ ಪತ್ರದಲ್ಲಿ ಏನಿದೆ?

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, ಮಾಜಿ ಪ್ರಧಾನಿ ದೇವೆಗೌಡರು, ಸಭಾಪತಿ ಇಲ್ಲದ ವೇಳೆ ಕುರ್ಚಿಯಲ್ಲಿ ಕೂರಬೇಡ ಎಂದು ಹೇಳಿದ್ದರೂ ಅವರಿಗೆ ಕುಮಾರಸ್ವಾಮಿ ಅವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಡದಿಂದ ಕುಳಿತು ಅವಮಾನ ಅನುಭವಿಸುವಂತಾಯಿತು. “ಧರ್ಮೇಗೌಡರು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯಿಂದ ಘಾಸಿಗೊಳಗಾಗಿದ್ದರು” ಎಂದು ದೇವಗೌಡರಾದಿಯಾಗಿ ಅನೇಕ ನಾಯಕರುಗಳ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಈ ವಿಚಾರವಾಗಿ ಅವಮಾನಕ್ಕೆ ಒಳಗಾಗಿದ್ದ ಧರ್ಮೇಗೌಡರ ಬಳಿ ಕುಮಾರಸ್ವಾಮಿ ಅವರು ಸೇರಿದಂತೆ ಇತರೇ ನಾಯಕರುಗಳು ಮಾತನಾಡಿ ಈ ಘಟನೆಗಳು ಸಾಮಾನ್ಯ ಎಂದು ಹೇಳಿ ಸಮಾಧಾನ ಮಾಡಲಾಗಿತ್ತು ಆದರೂ ಘನತೆವೆತ್ತ ಈ ಹುದ್ದೆಗೆ ಎಲ್ಲಾ ಸದಸ್ಯರು ಸೇರಿ ಮಾಡಿದ ಅವಮಾನದಿಂದ ಸೂಕ್ಷ್ಮ ಮನಸ್ಸಿನ ವ್ಯಕ್ತಿಗೆ ಸಾರ್ವಜನಿಕವಾಗಿ ಅವಮಾನವಾಗಿ ಈ ದುರ್ಘಟನೆ ನಡೆದಿದೆ, ಈ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು.

ಜನಸಾಮಾನ್ಯ ಮಾಸ್ಕ್ ಹಾಕಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ ಇಂತಹ ಘೋರ ಘಟನೆ ನಡೆದರು ಏಕೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.


ಇದನ್ನೂ ಓದಿ: BJP ಮತ್ತು JDS ವಿಲೀನವಲ್ಲದ ಹೊಂದಾಣಿಕೆ BJPಗೆ ಹೆಚ್ಚು ಲಾಭ: ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights