ಮೇಲ್ಜಾತಿಯವರ ಜೋಳವನ್ನು ತುಳಿದ ಹಸು: ದಲಿತ ತಾಯಿ-ಮಗನ ಮೇಲೆ ಮಾರಣಾಂತಿಕ ಹಲ್ಲೆ!

ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳು ಬೆಳಕಿಗೆ ಬರುತ್ತಿವೆ. ಬೈಕ್‌ ಮುಟ್ಟಿದ ಕಾರಣಕ್ಕೆ, ಮೇಲ್ಜಾತಿಯವರೊಂದಿಗೆ ಸ್ನೇಹ ಬೆಳಸಿದ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸುವ, ಹೊಡೆದು ಕೊಲ್ಲುವ ಘಟನೆಗಳು ವರದಿಯಾಗುತ್ತಲೇ ಇವೆ. ಅಂತಹ ಪ್ರಕರಣಗಳಿಗೆ ಚಿಕ್ಕಮಗಳೂರು ಜಿಲ್ಲೆಯೂ ಸಾಕ್ಷಿಯಾಗಿದೆ.

ಒಣಗಲು ಹಾಕಿದ್ದ ಜೋಳವನ್ನು ದಲಿತ ಕುಟುಂಬಕ್ಕೆ ಸೇರಿದ ಹಸು ತುಳಿಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಮೇಲ್ಜಾತಿಯ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಹಾಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಲ್ಜಾತಿಯವರ ಮನೆಯ ಮುಂದೆ ಒಣಗಲು ಹಾಕಿದ ಮೆಕ್ಕೆ ಜೋಳದ ಮೇಲೆ ನಡೆದು ಹೋಗಿದ್ದಕ್ಕೆ, ಕೋಪಗೊಂಡ ಮೇಲ್ಜಾತಿಯ ಯುವಕರ ಗುಂಪು ಹಲ್ಲೆ ಮಾಡಿದೆ. ಅಲ್ಲದೆ, ದಲಿತ ಕುಟುಂಬದವರ ಮನೆಯ ಬಾಗಿಲನ್ನೂ ಮುರಿದು ಹಾಕಿದ್ದಾರೆ. ಗಾಯಗೊಂಡ ಸಿದ್ದಮ್ಮ ಮತ್ತು ಆಕೆಯ ಮಗ ಪೂರ್ಣೇಶ್ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಸಿಗರೇಟ್‌ ಹಚ್ಚಲು ಬೆಂಕಿಪೊಟ್ಟಣ ನೀಡದಿದ್ದಕ್ಕೆ ದಲಿತನ ಹತ್ಯೆ!

ಘಟನೆ ನಡೆದ ಸ್ಥಳಕ್ಕೆ ಉಪ ಡಿವೈಎಸ್‌ಪಿ ಪ್ರಭು ಭೇಟಿ ನೀಡಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನ ನಡೆಯದಂತೆ ಮುಂಜಾಗ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಗ್ರಾಮದ ವಿನಯ್, ಭರತ್. ಪರ್ವತೇಗೌಡ ಹಾಗೂ ಮಂಜೇಗೌಡ ಆರೋಪಿಗಳು ಎಂದು ಹೇಳಲಾಗಿದೆ. ಆದರೆ, ಇದೂವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ವಿರುದ್ಧ ಹಲ್ಲೆಕೋರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಊರಿನಿಂದ ಬಹಿಷ್ಕಾರ ಹಾಕುವಂತೆ ದಲಿತ ಪರ ಸಂಘಟನೆಗಳು ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಮೇಲ್ಜಾತಿ ಸ್ನೇಹಿತರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights