ಯಾವ ಪಕ್ಷವನ್ನಾದರೂ ಸೇರಿ; ರಜಿನಿ ಅಭಿಮಾನಿ ಎಂಬುದನ್ನು ಮಾತ್ರ ಮರೆಯಬೇಡಿ: ರಜಿನಿಕಾಂತ್ ಅಭಿಮಾನಿ ಸಂಘ
ನಟ ರಜನಿಕಾಂತ್ ಅಭಿಮಾನಿಗಳ ಸಂಘದ ಸದಸ್ಯರು ಇತರ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಕ್ತರಾಗಿದ್ದಾರೆ. ಅವರು ತಮಗಿಚ್ಚಿಸಿದ ಪಕ್ಷವನ್ನು ಆಯ್ಕೆ ಮಾಡಿಕೊಂಡು ಸೇರಿಕೊಳ್ಳಬಹುದು. ಆದರೆ, ಅವರು ರಜಿನಿ ಅಭಿಮಾನಿಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ರಜನಿಕಾಂತ್ ಅಭಿಮಾನಿಗಳ ಸಂಘ ತಿಳಿಸಿದೆ.
ಆರೋಗ್ಯ ಸಮಸ್ಯೆಯಿಂದಾಗಿ ರಜಿನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಘೋಷಿಸಿದ ನಂತರ ರಜಿನಿ ಮಕ್ಕಳ್ ಮಂಡ್ರಮ್(ಆರ್ಎಂಎಂ) ಪಕ್ಷವು ಮಂಕಾಗಿದೆ. ಹಲವರು ಆರ್ಎಂಎಂ ತೊರೆದು ಇತರ ಪಕ್ಷಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ, ಸಂಘದ ಸದಸ್ಯರು ಆರ್ಎಂಎಂಗೆ ರಾಜೀನಾಮೆ ಸಲ್ಲಿಸಿದ ನಂತರ ತಮ್ಮ ಆಯ್ಕೆಯಂತೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಬಹುದು ಎಂದು ರಜಿನಿ ಅಭಿಮಾನಿಗಳ ಸಂಘ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ರಜಿನಿ ಮಕ್ಕಳ್ ಮಂಡ್ರಮ್ ನ ಕೆಲವು ಮುಖಂಡರು ಡಿಎಂಕೆಗೆ ಸೇರ್ಪಡೆಗೊಂಡ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಸಂಘದ ಸದಸ್ಯರು, ಒಂದು ವೇಳೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರು ಕೂಡಾ ಅವರು ಯಾವಾಗಲೂ ನಮ್ಮ ಪ್ರೀತಿಯ ನಾಯಕ, ನಟ ರಜನಿಕಾಂತ್ ಅವರ ಅಭಿಮಾನಿಗಳು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಆರ್ಎಂಎಂ ಮುಖಂಡ ವಿಎಂ ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!