ಖಾತೆ ಮುರುಹಂಚಿಕೆ ಮಾಡಿದ್ದಕ್ಕೆ ಸಿಡಿಯಿತಾ ಅತೃಪ್ತಿಯ ಬಾಂಬ್? ಸಚಿವ ಸುಧಾಕರ್ ಮನೆಯಲ್ಲಿ ‘ಅತೃಪ್ತ’ರ ಚರ್ಚೆ!
ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಖಾತೆ ಕ್ಯಾತೆ ಶುರುವಾಗಿದೆ. ಖಾತೆ ಮುರುಹಂಚಿಕೆ ಮಾಡಿದ್ದಕ್ಕೆ ಅತೃಪ್ತಿಯ ಬಾಂಬ್ ಸಿಡಿದಿದ್ದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ಸಚಿವರಿಗೆ ಇದ್ದಂತ ಖಾತೆಗಳನ್ನು ನೂತನ ಸಚಿವರಿಗೆ ಶಿಫಾರಸ್ಸು ಮಾಡಿದ್ದು ಕೆಲ ಸಚಿವರಿಗೆ ಬೇಸರ ತಂದಿದೆ.
ಮಾಧುಸ್ವಾಮಿ ಯಿಂದ ಎರಡು ಖಾತೆಯನ್ನು ತೆಗೆದುಕೊಳ್ಳಲಾಗಿದೆ. ನಾರಾಯಣಗೌಡ ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪೌರಾಡಳಿತ ಮತ್ತು ತೋಟಗಾರಿಕಾ ಖಾತೆ ನಿರ್ವಹಿಸುತ್ತಿದ್ದ ನಾರಾಯಣ ಗೌಡರಿಗೆ ಸದ್ಯ ಯುವ ಜನ ಸೇವೆ, ಕ್ರೀಡೆ, ಹಜ್, ವಕ್ಫ್ ಖಾತೆಯನ್ನು ನೀಡಲಾಗಿದೆ. ಎಂಟಿಬಿ ನಾಗರಾಜ್ ಅವರಿಗೆ ಕೊಟ್ಟ ಅಬಕಾರಿ ಖಾತೆಯ ಬಗ್ಗೆ ಅಸಮಧಾನವಿದೆ. ಇನ್ನೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ನಾನು ಯಾವುದೇ ಅಸಮಧಾನ ವ್ಯಕ್ತಪಡಿಸಿಲ್ಲ. 2 ದಿನದ ಹಿಂದೆ ಸಣ್ಣ ನೀರಾವರಿ ಮುಂದುವರೆಸಲು ಹೇಳಿದ್ದೆ. ಅದು ಬಿಟ್ಟರೆ ಯಾವುದೇ ಅಸಮಾಧಾನವಿಲ್ಲ ಎಂದಿದ್ದಾರೆ.
ಇನ್ನೂ ಸಚಿವ ಸುಧಾಕರ್ ಮನೆಯಲ್ಲಿ ಸೇರಿದ ಎಂಟಿಬಿ ನಾಗರಾಜ್, ಕೆ ಗೋಪಾಲಯ್ಯ ಸಚಿವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾಕಂದರೆ ಕೆಲವರಿಗೆ ಬಯಸಿದ ಖಾತೆ ಸಿಕ್ಕಿಲ್ಲ. ಕೆಲವರಿಗೆ ಬಯಸಿ ಪಡೆದ ಖಾತೆ ಕೈತಪ್ಪಿದೆ. ಹೀಗಾಗಿ ಸಭೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಒಂದು ಗಂಟೆಯಿಂದ ಸಚಿವ ಸುಧಾಕರ್ ಮನೆಯಲ್ಲಿ ಅತೃಪ್ತರ ಸಭೆ ನಡೆಯುತ್ತಿದ್ದು ಸಂಜೆ ಬಿಎಸ್ ವೈ ಭೇಟಿ ಮಾಡುವ ಸಾಧ್ಯತೆ ಇದೆ.
ರಾಜಭವನಕ್ಕೆ ನೂತನ ಸಚಿವರ ಖಾತೆ ಪಟ್ಟಿ ರವಾನೆ ಮಾಡಲಾಗಿದ್ದು, ಸಂಭಾವ್ಯ ಸಚಿವರ ಖಾತೆ ಪಟ್ಟಿ ಹೀಗಿದೆ.
ಉಮೇಶ್ ಕತ್ತಿ ಗೆ ಆಹಾರ ಮತ್ತು ನಾಗರೀಕ, ಅರವಿಂದ್ ಲಿಂಬಾವಳಿ ಅರಣ್ಯ ಇಲಾಖೆ, ಆರ್. ಶಂಕರ್ ಪೌರಾಡಳಿತ ಮತ್ತು ರೇಷ್ಮೇ, ಎಂಟಿಬಿ ನಾಗರಾಜ್ ಅಬಕಾರಿ, ಎಸ್. ಅಂಗಾರ ಮೀನುಗಾರಿಕೆ ಮತ್ತು ಬಂದರು,ಸಿಪಿ ಯೋಗೇಶ್ವರ್ ಸಣ್ಣ ನೀರಾವರಿ, ಮುರಗೇಶ್ ನಿರಾಣಿ ಗಣಿ ಮತ್ತು ಭೂವಿಜ್ಞಾನ, ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ನೀಡಲಾಗಿದೆ.
ಇಂದು 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದು 7 ಸಚಿವರಿಗೆ ಕೊಟ್ಟಂತ ಖಾತೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.