“ಇದು ತೇಜಶ್ವಿ ಯಾದವ್ ಮಾತನಾಡುತ್ತಿದ್ದೇನೆ” ಬಿಹಾರದಲ್ಲಿ ಫೋನ್ ಕರೆ ವೈರಲ್!
ಬಿಹಾರ ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಅವರ ಪ್ರಭಾವ ತೋರಿಸುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಉನ್ನತ ಅಧಿಕಾರಿಯೊಂದಿಗೆ ಮಾತನಾಡಿದ ಯಾದವ್ ಫೋನ್ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಹೌದು.. ಪಾಟ್ನಾದಲ್ಲಿ ಪ್ರತಿಭಟನಾ ನಿರತ ಶಿಕ್ಷಕರಿಗೆ ತಮ್ಮ ಬೆಂಬಲವನ್ನು ತೋರಿಸಲು ರಾಷ್ಟ್ರೀಯ ಜನತಾದಳ (ಆರ್ಜೆಡಿ) ನಾಯಕ ಆಗಮಿಸಿದಾಗ ಪ್ರತಿಭಟನಾಕಾರರು ತಮ್ಮ ಯೋಜಿತ ಸ್ಥಳದಲ್ಲಿ ಧರಣಿ ನಡೆಸಲು ಅನುಮತಿ ನಿರಾಕರಿಸಲಾಗಿರುವ ವಿಚಾರ ತಿಳಿದಿದೆ. ಆಗ ಯಾದವ್ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಮತ್ತು ಪಾಟ್ನಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರತಿಭಟನೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಆನ್ಲೈನ್ನಲ್ಲಿ ಹಂಚಿಕೊಮಡ ವೀಡಿಯೊವೊಂದರಲ್ಲಿ, ತೇಜಶ್ವಿ ಯಾದವ್ ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಅವರೊಂದಿಗೆ ಪ್ರತಿಭಟನಾ ಸ್ಥಳದಿಂದ ಮಾತನಾಡಿದ ಸಂಭಾಷಣೆ ಹೀಗಿದೆ.
“ಈ ಜನರು ಧರಣಿಯಲ್ಲಿ ಕುಳಿತುಕೊಳ್ಳಲು ಅನುಮತಿಸಲಾಗುತ್ತಿಲ್ಲ ಎಂದು ಹೇಳುತ್ತಾರೆ” ಏಕೆ ಎಂದು ಯಾದವ್ ಸಿಕ್ಕಾಧಿಕಾರಿಗೆ ಪ್ರಶ್ನಿಸಿದರು.
“ಅವರು ಪ್ರತಿದಿನ ಅನುಮತಿ ಕೇಳುವ ಅಗತ್ಯವಿದೆಯೇ? ಲಾಠಿ ಚಾರ್ಜ್ ಮಾಡಿ, ಆಹಾರವನ್ನು ಎಸೆದು, ಅವರನ್ನು ಓಡಿಸಲಾಯಿತು. ಈಗ ಅವರೆಲ್ಲರೂ ಚದುರಿಹೋಗಿದ್ದಾರೆ. ಅವರಲ್ಲಿ ಕೆಲವರು ನನ್ನೊಂದಿಗೆ ಇಕೋ ಪಾರ್ಕ್ನಲ್ಲಿದ್ದಾರೆ . ನಾನು ಅವರ ಅರ್ಜಿಯನ್ನು ವಾಟ್ಸಾಪ್ ಮೂಲಕ ನಿಮಗೆ ಕಳುಹಿಸುತ್ತೇನೆ. ನೀವು ದಯವಿಟ್ಟು ಅವರಿಗೆ ಅವಕಾಶ ನೀಡಿ ಎಂದು ಹಿರಿಯ ಅಧಿಕಾರಿಗೆ ಸೂಚನೆ ನೀಡಿದರು.
ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಅವರು ಅರ್ಜಿ ಪರಿಶೀಲಿಸುತ್ತೇವೆ ಎಂದು ಉತ್ತರಿಸಿದರು.ನೀವು ಅದನ್ನು ಯಾವಾಗ ಮಾಡುತ್ತೀರಿ? ಎಂದು ಯಾದವ್ ಮರುಪ್ರಶ್ನಿಸಿದ್ದಾರೆ.ಈ ಸಮಯದಲ್ಲಿ ಗಲಾಟೆ ಮಾಡಿದ ಅಧಿಕಾರಿ ಚಂದ್ರಶೇಖರ್ ಸಿಂಗ್, “ನೀವು ನನ್ನನ್ನು ಪ್ರಶ್ನಿಸುವಿರಾ?” ಎಂದು ಕೇಳಿದ್ದಾರೆ.ಆಗ ಇದು ತೇಜಶ್ವಿ ಯಾದವ್ ಮಾತನಾಡುವುದು ಡಿಎಂ ಸರ್ . ಎಂದು ಯಾದವ್ ಹೇಳಿದ್ಧಾರೆ.ಕೊಂಚ ಸಮಯ ಮೌನವಾಗಿದ್ದ ಸಿಂಗ್ ನಂತರ ಮಾತಿನ ದಾಟಿಯೇ ಬದಲಾಗಿದೆ. “ಅಚಾ ಸರ್, ಸರ್, ಸರ್ (ಸರಿ, ಸರ್)” ಎಂದು ಶ್ರೀ ಸಿಂಗ್ ಹೇಳಿದರು. “ನಾನು ನಿಮಗೆ ವಾಟ್ಸಾಪ್ ಪ್ರತಿಯನ್ನು ಕಳುಹಿಸುತ್ತೇನೆ. ವೇಗವಾಗಿ ಪ್ರತಿಕ್ರಿಯಿಸಿ ಅಥವಾ ನಾವು ರಾತ್ರಿಯಿಡೀ ಇಲ್ಲಿ ಕುಳಿತುಕೊಳ್ಳಬೇಕಾಗುತ್ತದೆ” ಎಂದು ತೇಜಶ್ವಿ ಯಾದವ್ ಕರೆ ಕಡಿತಗೊಳಿಸಿದರು.
ಈ ಕ್ಲಿಪ್ ಹಂಚಿಕೊಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾಜಿ ಸಹಾಯಕ ಕಾರ್ಯಕರ್ತ ಸುಧೀಂದ್ರ ಕುಲಕರ್ಣಿ ಅವರು ಹೀಗೆ ಬರೆದಿದ್ದಾರೆ, “ನೋಡಲೇಬೇಕು. ಮತ್ತು ತೇಜಶ್ವಿ ಯಾದವ್ ಭಾರತದ ಅತ್ಯಂತ ಭರವಸೆಯ ಸಮೂಹ ನಾಯಕರಲ್ಲಿ ಏಕೆ ವೇಗವಾಗಿ ಹೊರಹೊಮ್ಮುತ್ತಿದ್ದಾರೆಂದು ತಿಳಿಯಲು ಕೊನೆಯವರೆಗೂ ಆ ಡಿಯೋ ಕೇಳಿ “ಎಂದಿದ್ದಾರೆ.
"Hum Tejashvi Yadav Bol Rahe Hain, DM Saab…"
Must watch. And watch it till the end to know why @yadavtejashwi is fast emerging as one of the most promising mass leaders of India. https://t.co/QVhd4W1yTs
— Sudheendra Kulkarni (@SudheenKulkarni) January 21, 2021
31 ವರ್ಷದ ತೇಜಶ್ವಿ ಯಾದವ್ ಅವರು ಬಿಹಾರ ಚುನಾವಣೆಯಲ್ಲಿ ವಿರೋಧ ಪಕ್ಷದ ಒಕ್ಕೂಟವನ್ನು ಪ್ರಭಾವಶಾಲಿಯಾಗಿ ಮುನ್ನಡೆಸಿದರು. ಅವರ ಆಕ್ರಮಣಕಾರಿ ಅಭಿಯಾನದಿಂದ ನಡೆಸಲ್ಪಟ್ಟ, ತಮ್ಮದೇ ಪಕ್ಷವು ದೊಡ್ಡದಾಗಿದೆ.