ಜೀವಂತವಾಗಿ ಮತ್ತೆ ಬರುತ್ತಾರೆಂದು ಎರಡು ಹೆಣ್ಣುಮಕ್ಕಳನ್ನು ಕೊಂದ ತಾಯಿ…!
ಜೀವಂತವಾಗಿ ಮತ್ತೆ ಬರುತ್ತಾರೆಂದು ತಾಯಿಯೊಬ್ಬಳು ಎರಡು ಹೆಣ್ಣುಮಕ್ಕಳನ್ನು ಕೊಂದ ಆಘಾತಕಾರಿ ಪ್ರಕರಣವೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಡಂಬ್ಬೆಲ್ಗಳನ್ನು ಬಳಸಿ ಆರೋಪಿ ಪದ್ಮಜಾ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿದ್ದಾಳೆ. ಅಲೆಖ್ಯಾ (27) ಮತ್ತು ಸಾಯಿ ದಿವಿಯಾ (22) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ಪತಿ ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆ.
ಘಟನೆಯ ಬಗ್ಗೆ ವಿಚಾರಿಸಿದಾಗ ತಾಯಿ ಪದ್ಮಜಾ “ಸೂರ್ಯೋದಯದ ನಂತರ ಅವರ ಹೆಣ್ಣುಮಕ್ಕಳು ಮತ್ತೆ ಜೀವಂತವಾಗಿ ಬರುತ್ತಾರೆ. “ಕಲ್ಯುಗ” ಕೊನೆಗೊಳ್ಳುತ್ತದೆ ಮತ್ತು “ಸತ್ಯುಗ” ಸೋಮವಾರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದ್ದು ಪೊಲೀಸರು ಆಶ್ವರ್ಯಗೊಂಡಿದ್ದಾರೆ. ಹೀಗೆ ಹೇಳಿದ್ದು ಕೇಳಿದರೆ ಬಹುಶ: ತಾಯಿ ಬುದ್ಧ ಮಾಂದ್ಯಯಾಗಿರಬಹುದು ಎಂದು ನೀವು ಕಲ್ಪಿಸಿಕೊಳ್ಳಬಹುದು. ಆದರೆ ಪದ್ಮಜಾ ಮತ್ತು ಅವರ ಪತಿ ಪುರುಷೋತ್ತಮ್ ನಾಯ್ಡು ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಾರೆ.
ದಂಪತಿಯ ಹಿರಿಯ ಮಗಳು ಅಲೆಖ್ಯಾ ಭೋಪಾಲ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರೆ, ಕಿರಿಯ ಮಗಳು ಸಾಯಿ ದಿವ್ಯಾ ಬಿಬಿಎ ಪದವೀಧರರಾಗಿದ್ದರು. ದಿವ್ಯಾ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯೂ ಆಗಿದ್ದಾಳೆ. ಲಾಕ್ ಡೌನ್ ಸಮಯದಲ್ಲಿ ಇವಳು ಮನೆಗೆ ಮರಳಿದ್ದಳು.
ಭಾನುವಾರ ರಾತ್ರಿ ದಂಪತಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದರು. ಮನೆಯಿಂದ ವಿಚಿತ್ರ ಶಬ್ದಗಳು ಮತ್ತು ಕೂಗುಗಳನ್ನು ಕೇಳಿದ ನೆರೆಹೊರೆಯವರು ಪೊಲೀಸರನ್ನು ಕರೆದಿದ್ದಾರೆ.
ಪೊಲೀಸರು ಮನೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ದಂಪತಿಗಳು ವಿರೋಧಿಸಿದ್ದಾರೆ. ಆದರೆ ಕೊನೆಗೆ ಪೊಲೀಸರು ಮನೆಯೊಳಗೆ ಬಲವಂತವಾಗಿ ಬಂದಾಗ ಬಾಲಕಿಯರ ಶವಕಂಡು ಆಘಾತಕ್ಕೊಳಗಾಗಿದ್ದಾರೆ. ಬಾಲಕಿಯೊಬ್ಬರ ಶವವನ್ನು ಪೂಜಾ ಕೋಣೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಇನ್ನೊಂದು ಕೋಣೆಯಲ್ಲಿ ಇನ್ನೊಂದು ಶವ ಪತ್ತೆಯಾಗಿದೆ. ದೇಹಗಳನ್ನು ಕೆಂಪು ಬಟ್ಟೆಯಲ್ಲಿ ಮುಚ್ಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ದಂಪತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ವಾಮಾಚಾರ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.