ದೆಹಲಿ ತಲುಪಿದ ರೈತರು: ಕೆಂಪುಕೋಟೆ ಮೇಲೆ ಹಾರಿದ ರೈತರ ಧ್ವಜಗಳು!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ಟ್ರಾಕ್ಟರ್ ರ್ಯಾಲಿ ನಡೆಸುತ್ತಿರುವ ರೈತರ ಒಂದು ಗುಂಪು ಕೆಂಪು ಕೋಟೆಯನ್ನು ತಲುಪಿದೆ. ಅಲ್ಲಿ ನೆರೆದಿರುವ ರೈತರು ಕೆಂಪು ಕೋಟೆಯ ಮೇಲೆ ಹತ್ತಿದ್ದು, ಭಾರತದ ಧ್ವಜ ಸೇರಿದಂತೆ, ಸಿಖ್ ಹಾಗೂ ರೈತ ಧ್ವಜಗಳನ್ನು ಹಾರಿಸಿದ್ದಾರೆ. ನಂತರ ಸಿಖ್ ಧ್ವಜ ಮತ್ತು ರೈತರ ಧ್ವಜವನ್ನು ಇಳಿಸಿದ್ದು ಭಾರತದ ಧ್ವಜವನ್ನಷ್ಟೇ ಉಳಿಸಿದ್ದಾರೆ.
ಸಾವಿರಾರು ಜನರು ಅಲ್ಲಿ ನೆರದಿದ್ದು ರಾಷ್ಟ್ರಧ್ವಜಗಳನ್ನು ಕೈಯಲ್ಲಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ರ್ಯಾಲಿಯನ್ನು ಮುನ್ನಡೆಸುತ್ತಿರುವ ರೈತ ಮುಖಂಡರಲ್ಲಿ ಒಬ್ಬರಾರ ದರ್ಶನ್ ಪಾಲ್ ಕೆಂಪು ಕೋಟೆಗೆ ತೆರಳುತ್ತಿದ್ದು, ಅಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿ ಅವರನ್ನು ಮನ ಒಲಿಸುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ರೈತರು ಅಲ್ಲಿಂದ ವಾಪಾಸು ತಾವಾಗಿಉಯೇ ತೆರಳುತ್ತಿದ್ದಾರೆ.