ಅಕ್ಕ-ತಂಗಿ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್: ಹಿರಿಯಳನ್ನು ಕೊಂದ ಪೋಷಕರು! ಕಾರಣವೇನು?
ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೃತರ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯ ವೇಳೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಹಿರಿಯ ಮಗಳನ್ನು ನಾವೇ ಕೊಲೆ ಮಾಡಿದೆವು. ಕಿರಿಯ ಮಗಳನ್ನು ಹಿರಿಯ ಮಗಳೇ ಕೊಲೆ ಮಾಡಿದ್ದಳು ಎಂದು ಆರೋಪಿ ತಾಯಿ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿ ಜಿಲ್ಲೆಯ ಮದನಪೆಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಹಿರಿಯ ಮಗಳು ಅಲೈಖ್ಯಾ ಎಂಬಾಕೆ ಕಿರಿಯ ಮಗಳಾದ ಸಾಯಿದಿವ್ಯಾಳನ್ನು ಕೊಲೆ ಮಾಡಿದ್ದಳು. ನಂತರ ನಮ್ಮ ಬಳಿ ಬಂದು, ನಾನು ಸಾಯಿದಿವ್ಯಾಳನ್ನು ಕೊಲೆ ಮಾಡಿದ್ದೇನೆ. ನೀವು ನನ್ನನ್ನೂ ಕೊಲೆ ಮಾಡಿ, ನಾನು ಹೋಗಿ ಅವರಳನ್ನು ವಾಪಸ್ ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಅದಕ್ಕೆ, ನಾವು ಅವಳನ್ನು ಕೊಲೆ ಮಾಡಿದೆವು ಎಂದು ತಾಯಿ ಪದ್ಮಜಾ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ಈ ಘಟನೆ ನಡೆಸಿದ್ದು, ನೆರೆ-ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಪೊಲೀಸರು ಮನೆಗೆ ಬೂಟು ಕಾಲಿನಲ್ಲಿ ಬಂದು ಮನೆಯೊಳಗೆಲ್ಲ ಬೂಟ ಕಾಲಿನಲ್ಲೇ ಓಡಾಡಿದ್ದಾರೆ. ಆಗ ಅವರ ತಾಯಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲ ಕಡೆಯೂ ದೇವರಿದ್ದಾರೆ, ನೀವೇಕೆ ಬೂಟು ಕಾಲಿನಲ್ಲಿ ಓಡಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ತಾಯಿ ಕೋಪದಿಂದ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ಇಬ್ಬರು ಹೆಣ್ಣ ಮಕ್ಕಳ ಮೃತ ದೇಹವನ್ನು ಬೆತ್ತಲೆಗೊಳಿಸಿ ರೂಮಿನಲ್ಲಿ ಇಡಲಾಗಿತ್ತು. ಮೃತ ದೇಹಗಳಿದ್ದ ರೂಮಿಗೆ ಪೊಲೀಸರು ಹೋಗದಂತೆ ತಾಯಿ ತಡೆದಿದ್ದಾರೆ. ನನ್ನ ಮಕ್ಕಳು ಬಟ್ಟೆಯಿಲ್ಲದೆ ಇದ್ದಾರೆ. ನೀವು ಅಲ್ಲಿಗೆ ಹೋಗುವಂತಿಲ್ಲ ಎಂದು ಹೇಳಿದ್ದಾರೆ.
ನಂತರ ಪೊಲೀಸರು ನಾವು ನಿಮ್ಮ ಮಕ್ಕಳಿಗೆ ನಮಸ್ಕಾರ ಮಾಡಿ ಬರುತ್ತೇವೆ ಎಂದು ಹೇಳಿ ರೂಂ ಒಳಗೆ ಹೋಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲೂ ದಂಪತಿ ಬಿಟ್ಟಿಲ್ಲ. ಈಗ ಬೇಡ ಸೋಮವಾರ ಬಂದು ಅವರನ್ನು ಕರೆದುಕೊಂಡು ಹೋಗಿ. ನಮ್ಮ ಮಕ್ಕಳು ನಾಳೆ ಬೆಳಗ್ಗೆ ಬದುಕಿ ಬರುತ್ತಾರೆ ಎಂದು ಅವರು ವಾದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೂ ಪುರ್ನಜನ್ಮದ ಬಗ್ಗೆ ಅತೀವ ನಂಬಿಕೆ ಹುಟ್ಟಿಸಿದ್ದರು. ಅದೇ ನಂಬಿಕೆಯ ಮೇಲೆಯೇ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹಿಳೆ ಮತ್ತು ಬಾಲಕಿ ಮೇಲೆ ಅತ್ಯಾಚಾರ; ಸಾಕ್ಷ್ಯಾನಾಶಕ್ಕಾಗಿ ಬಾಲಕಿಯ ಕೊಲೆ!