ನಟಿ ತಾಪ್ಸಿ ವಿರುದ್ಧ ವೈಯಕ್ತಿಕವಾಗಿ ನಿಂದಿಸಿದ ಸಂಸದ ಪ್ರತಾಪ್ ಸಿಂಹ; ನಿಮಗೆ ನಾಚಿಕೆಯಾಗಬೇಕು ಎಂದ ನೆಟ್ಟಿಗರು!

ಮೂರು ತಿಂಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯ ಬಾಲಿವುಡ್‌ ಅಂಗಳದಲ್ಲಿಯೂ ರೈತರ ಪರ-ವಿರುದ್ಧ ಸಿನಿಮಾ ಸ್ಟಾರ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ವೇಳೆ ರೈತರನ್ನು ಬೆಂಬಲಿಸಿದ್ದ ಬಾಲಿವುಡ್‌ ನಟಿ ತಾಪ್ಸಿ ಪನ್ನು ವಿರುದ್ಧ ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ ವೈಯಕ್ತಿಕ ವಿಚಾರ ಇಟ್ಟುಕೊಂಡು ನಿಂದಿಸಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರೆಲಿ ರಿಹನ್ನಾ ಅವರ ಟ್ವೀಟ್‌ ವಿರುದ್ಧ ಬಿಜೆಪಿ ಭಾರತದ ಕೆಲವು ಸೆಲೆಬ್ರಟಿಗಳನ್ನು ಟ್ವೀಟ್‌ ಮಾಡುವಂತೆ ಪ್ರಚೋದಿಸಿತ್ತು. ಈ ಬಗ್ಗೆ ಪ್ರತಿಕ್ರಿಸಿದ್ದ ತಾಪ್ಸಿ, ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲುಗಾಡಿಸುವುದಾದರೆ…., ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ…, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲುಗಾಡಿಸುವುದಾದರೆ…, ಬೇರೆಯವರಿಗೆ ಅಪಪ್ರಚಾರದ ಪಾಠ ಮಾಡಲು ಬರಬೇಡಿ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ ಎಂದು ಟ್ವೀಟ್ ಮಾಡಿದ್ದರು.

ತಾಪ್ಸಿ ಅವರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ ಪ್ರತಿಕ್ರಿಸಿರುವ ಸಂಸದ ಪ್ರತಾಪ್ ಸಿಂಹ, ‘ಓಹ್ ತಾಪ್ಸೀ, ಓರ್ವ ರಶ್ದೀಯಿಂದ ಭಾರತದ ಮುಸ್ಲೀಮರು ಅಲುಗಾಡಿದರು, ಒಂದು ಕಾರ್ಟೂನ್‌ ವಿಶ್ವದೆಲ್ಲೆಡೆಯ ಮುಸ್ಲೀಮರನ್ನು ಅಲುಗಾಡಿಸಿತು, ಒಂದು ಪುಸ್ತಕ (The da Vinci Code) ವಿಶ್ವದೆಲ್ಲೆಡೆ ಕ್ರೈಸ್ತರನ್ನು ಅಲುಗಾಡಿಸಿತು. ಒಮ್ಮೆ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ನಿಮ್ಮನ್ನು ಸ್ಕ್ರಿಪ್ಟೆಡ್‌ ಸಿನಿಮಾ ಡೈಲಾಗ್‌ಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಿ. ಉಳಿದ ಎಲ್ಲವೂ ನಿಮ್ಮ ಜ್ಞಾನಕ್ಕೆ ಹೊರತಾದದ್ದು, ಎಂದು ಟ್ವೀಟ್‌ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಮಹಿಳಾ ನೆಲೆಯಾಧಾರಿತ ಸಿನಿಮಾ ಥಪ್ಪಡ್‌ ಸಿನಿಮಾದಲ್ಲಿ ಗಂಡ ಕೆನ್ನೆಗೆ ಹೊಡೆದ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯುವ ಮಹಿಳೆಯ ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸಿದ್ದಾರೆ.

ಈ ಸಿನಿಮಾದ ಕತೆಯನ್ನು ಇಟ್ಟುಕೊಂಡು ತಾಪ್ಸಿ ವಿರುದ್ದ ನಿಂದನಾತ್ಮಕ ಟ್ವೀಟ್‌ ಮಾಡಿರುವ ಸಂಸದರ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.

ತಮ್ಮ ಬತ್ತಲಿಕಯ ಎಲ್ಲಾ ಬಾಣ ಪ್ರಯೋಗ ಮಾಡಿ ಸೋತ ಮೇಲೆ, ಕೊನೆಯ ಅಸ್ತ್ರ ಹೀಗೆ ಅವರ ಖಾಸಗೀ ಬದುಕಿನ ಬಗ್ಗೆ ಚರ್ಚೆ ಮಾಡುವುದು.. ಇದು ಬಿಜೆಪಿ ಮೂಲ ಅಸ್ತ್ರ ಅಲ್ವಾ ಸಿಂಹ ಅವರೇ.. ಎಂದು ಅಶೋಕ್‌ ಚರಣ್‌ ಎಂಬುವವರು ಕಮೆಂಟ್‌ ಮಾಡಿದ್ದಾರೆ.

ನಿನ್ನ ವಯಕ್ತಿಕ ವಿಷ್ಯ ತೆಗೆದರೆ ಜನ್ಮಕ್ಕೆ ಆಗುವಷ್ಟು ಹೊಲಸು ತುಂಬಿಕೊಂಡಿದೆ ಮೊದಲು ಅದನ್ನ ಸ್ವಚ್ಛ ಮಾಡು ಆಮೇಲೆ ಹೆಣ್ಣು ಮಕ್ಕಳಾ ಬಗ್ಗೆ ಹಾಕು…ನಿನ್ನ ಪಕ್ಷದ ಗುಲಮಿತನ ಒಂದು ಹೆಣ್ಣಿನ ಮೇಲೆ ಅಲ್ಲ ತೋರಿಸೋದು… ರಾಜಕೀಯ ಮಾಡ್ತ್ಯ ಸರಿಯಾಗಿ ಮಾಡು… ಸೈಟ್ ತ್ತೆಗೆದುಕೊಳ್ಳುವುದಕ್ಕೆ ನೀನು ಮಾಡಿದ ಘನಂದಾರಿ ಕೆಲಸ ರಾಜ್ಯಕ್ಕೆ ಗೊತ್ತು… ಐವೈಸಿ ಉಡುಪಿ ಎಂಬ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ.

ಬಿಜೆಪಿ ಯವರಿಗೆ ಕಂಡವರ ಸಂಸಾರದ ಬಗ್ಗೆ ಮಾತನಾಡಲಿಲ್ಲ ಅಂದ್ರೆ ತಿಂದಿದ್ದು ಅರಗೋದೆ ಇಲ್ಲಾ ಅನ್ಸುತ್ತೆ ಸರ್ ವಿಷಯಾಧಾರಿತ ಚರ್ಚೆ ನಡೆಸಿ, ಅಂದ್ರೆ ನೀನು ಯಾಕೆ ಡೈವೋರ್ಸ್ ತಗೊಂಡೆ, ಗಂಡನ್ಯಾಕೆ ಬಿಟ್ಟೆ ಅಂತ ವೈಯಕ್ತಿಕ ವಿಷಯ ಇಟ್ಕೊಂಡು ಕಥೆ ಹೊಡಿತಿರಾ ನಿಮ್ಮ ವೈಯಕ್ತಿಕ ವಿಷಯ ತೆಗೆದ್ರೆ ಸಾವಿರ ಇರುತ್ವೆ (ಮೂಡ ಸೈಟ್) ಅಸಹ್ಯ, ಗೌರವಿಸೋದು ಕಲೀರಿ ಎಂದು ಹರ್ಷ ಎಂಬುವವರು ಕಮೆಂಟ್‌‌ ಮಾಡಿದ್ದಾರೆ.

ಮಾನ್ಯ ಸಂಸದರೆ ಯಾವುದೇ ವಿಷಯಗಳಲ್ಲಿ ಧರ್ಮಗಳನ್ನು ಎಳೆದು ತರದೆ ಟ್ವೀಟ್ ಮಾಡಲು, ಮಾತನಾಡಲು ನಿಮಗೆ ಗೊತ್ತೇ ಇಲ್ವಾ..? ಎಂದು ಹರೀಶ್‌ ಸೋಕಿಲಾ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ; ನೀಮ್ಮ ಮೌಲ್ಯ ಪೊಳ್ಳಾಗಿದೆ: ತಾಪ್ಸಿ ಪನ್ನು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights