ಲಕ್ಷಾಂತರ ಮೌಲ್ಯದ ನಗದು ಮತ್ತು ಆಭರಣಗಳಿಗೆ ಬೆಂಕಿ ಹಚ್ಚಿದ ಮಾನಸಿಕ ಅಸ್ವಸ್ಥ..!
ಚಳಿಗಾಲದ ಅವಧಿಯಲ್ಲಿ ಜನರು ಚಳಿಯನ್ನು ತಪ್ಪಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಉತ್ತರ ಪ್ರದೇಶದ ಮಹೋಬಾ ನಗರದಲ್ಲಿ, ಶೀತವನ್ನು ತೊಡೆದುಹಾಕಲು ಮಾನಸಿಕವಾಗಿ ಅಸ್ವಸ್ಥನೊಬ್ಬ ಮಾಡಿದ ಕೆಲಸ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ.
ಮಹೋಬಾ ಜಿಲ್ಲೆಯ ಕೊಟ್ವಾಲಿ ಪ್ರದೇಶದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಈ ಮಾನಸಿಕ ವಿಕಲಚೇತನ ವ್ಯಕ್ತಿ ಬೆಂಕಿ ಹಚ್ಚಿದ್ದಾನೆ. ಹತ್ತಿರದ ನೈರ್ಮಲ್ಯ ಕಾರ್ಮಿಕರ ಪ್ರಕಾರ, ಈ ವ್ಯಕ್ತಿಯು ಲಕ್ಷಾಂತರ ನಗದು, 2 ಆಂಡ್ರಾಯ್ಡ್ ಮೊಬೈಲ್, ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ತೀಕ್ಷ್ಣವಾದ ಆಯುಧಕ್ಕೆ ಬೆಂಕಿ ಹಚ್ಚಿದ್ದಾನೆ. ಕಸದ ರಾಶಿಯಲ್ಲಿ ಲಕ್ಷಾಂತರ ಹಣವನ್ನು ಸುಟ್ಟುಹಾಕಿದ ಈ ಮಾನಸಿಕ ವಿಕಲಚೇತನ ವ್ಯಕ್ತಿ ನಗುತ್ತಾ ಮಲಗಿರುವ ದೃಶ್ಯ ವೈರಲ್ ಆಗಿದೆ. ‘ನಾನು ಶೀತದಿಂದ ಬಳಲುತ್ತಿದ್ದೆ ಹಾಗಾಗಿ ನನಗೆ ಸಿಕ್ಕಿದ್ದಕ್ಕೆ ನಾನು ಬೆಂಕಿ ಹಚ್ಚಿದೆ’ ಎಂದು ಮಾನಸಿಕ ಅಸ್ವಸ್ಥ ಹೇಳಿದ್ದಾನೆ.
ಘಟನೆ ಮಾಹಿತಿ ತಿಳಿದ ಕೂಡಲೆ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸೈಕೋ ಎಲ್ಲಿಂದ ಇಷ್ಟು ಹಣವನ್ನು ಪಡೆದ? ಎಂಬುದರ ಬಗ್ಗೆ ಪೊಲೀಸರು ಉತ್ತರಿಸಲು ಸಿದ್ಧರಿಲ್ಲ. ಪ್ರಕರಣವನ್ನು ನಿರಂತರವಾಗಿ ತನಿಖೆ ನಡೆಸಲಾಗುತ್ತಿದೆ.