ಸಾರಿಗೆ ಸಿಬ್ಬಂದಿಗಳ ಬೇಡಿಕೆಗೆ ಆಗ್ರಹಿಸಿ ಇಂದು ಮತ್ತೆ ಪ್ರತಿಭಟನೆ..!

ಸಾರಿಗೆ ಸಿಬ್ಬಂದಿಗಳ ಬೇಡಿಕೆಗೆ ಆಗ್ರಹಿಸಿ ಇಂದು ಬಿಎಂಟಿಸಿ ಕೇಂದ್ರ ಕಚೇರಿ ಎದುರು ಬಿಎಂಟಿಸಿ ಸಿಬ್ಬಂದಿಗಳು ಪ್ರತಿಭಟನೆಗೆ ಮಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಗೆ ಕರೆ ಕೊಡಲಾಗಿದ್ದು ಬಸ್ ಸಂಚಾರ ಎಂದಿನಂತೆ ಸಾಗಿದೆ.

ಆಂತರಿಕ ವಲಯದಲ್ಲಿ ಬಿಎಂಟಿಸಿ ಸಿಬ್ಬಂದಿಗಳಿಗೆ ಅರ್ಧ ಸಬಂಳ, ಹಿರಿಯ ಅಧಿಕಾರಿಗಳ ಕಿರುಕುಳ, ರಜೆ ವಿಚಾರಕ್ಕೆ ಸಂಘರ್ಷ ನಡೆಯುತ್ತಿದ್ದು ಇದರಿಂದ ಅಭದ್ರತೆ ಕಾಡುತ್ತಿದೆ ಎಂದು ಆರೋಪಿಸಿ ಸಿಬ್ಬಂದಿಗಳು ಧರಿಣಿ ನಡೆಸುತ್ತಿದ್ದಾರೆ. ಈ ಹಿಂದೆ ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆ ಮಾಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರಿಂದ ಭರವಸೆ ಪಡೆದುಕೊಂಡಿದ್ದರು. ಆದರೆ ಈವರೆಗೂ ಬೇಡಿಕೆಗಳು ಪೂರೈಕೆಯಾಗಿಲ್ಲ. ಇದರಿಂದ ರೋಸಿಹೋದ ಪ್ರತಿಭಟನಾಕಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಜೊತೆಗೆ ಈ ಹಿಂದೆ ಹೋರಾಟ ಮಾಡಲು ಮುಂದಾಳತ್ವ ವಹಿಸಿದವರನ್ನು ಟಾರ್ಗೇಟ್ ಮಾಡಲಾಗಿದೆ. ಅಂಥವರ ಪಟ್ಟಿ ರೆಡಿಯಾಗಿದ್ದು ಸಂಬಳ ಸರಿಯಾಗಿ ಕೊಡುತ್ತಿಲ್ಲ. ರಜೆ ಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲದೇ ಮೂರು ತಿಂಗಳಿಂದ ಸಂಬಳ ಕೊಡುತ್ತಿಲ್ಲ. ಜೊತೆಗೆ ಎಲ್ಲರಿಗೂ ಕೆಲಸ ನೀಡುತ್ತಿಲ್ಲ. ಕೆಲವರಿಗೆ ಮಾತ್ರ ಕೆಲಸ ಹೆಚ್ಚಿಗೆ ಕೊಡಲಾಗುತ್ತಿದೆ. ಉಳಿದಂತೆ ನೌಕರರು ಕೆಲಸವೂ ಇಲ್ಲದೇ ಸಂಬಳವೂ ಇಲ್ಲದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ “ಸಂಬಳ ಪೆಂಡಿಂಗ್ ಇಡಲು ಸಾಧ್ಯವಿಲ್ಲ. ಧರಣಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಲ್ಲ. ಕೊಟ್ಟ ಮಾತು ನಾವು ಉಳಿಸಿಕೊಂಡೇ ಕೊಡುತ್ತವೆ” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights