ಕಲುಷಿತ ನೀರು ಕುಡಿದು ಓರ್ವ ವ್ಯಕ್ತಿ ಸಾವು : 10 ಜನ ಅಸ್ವಸ್ಥ..!
ಕಲುಷಿತ ನೀರು ಕುಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು 10 ಮಂದಿ ಅಸ್ವಸ್ಥರಾದ ಘಟನೆ ಕೋಲ್ಕತ್ತಾದ ಭವಾನಿಪೋರ್ ಪ್ರದೇಶದಲ್ಲಿ ನಡೆದಿದೆ.
ಸಶಿ ಶೇಖರ್ ಬೋಸ್ ರೋನಲ್ಲಿರುವ ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್ನ (ಕೆಎಂಸಿ) ಕಾರ್ಮಿಕ ಕ್ವಾರ್ಟರ್ಸ್ ನಿವಾಸಿ 43 ವರ್ಷದ ಭುವನೇಶ್ವರ ದಾಸ್ ಶನಿವಾರ ಕಲುಷಿತ ಕೊಳಚೆನೀರು ನೀರನ್ನು ಸೇವಿಸಿ ಸಾವನ್ನಪ್ಪಿದ್ದಾರೆ.
ಕ್ವಾರ್ಟರ್ಸ್ನಲ್ಲಿ ಕನಿಷ್ಠ 10 ಇತರ ನಿವಾಸಿಗಳು ನೀರು ಸೇವಿಸಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕೆಎಂಸಿ ಪೂರೈಸಿದ ಕುಡಿಯುವ ನೀರನ್ನು ಸೇವಿಸಿದ್ದಾರೆ. ಇದಕ್ಕೆ ಡಿಎಲ್ ಖಾನ್ ರಸ್ತೆಯಲ್ಲಿ ಮಾಲಿನ್ಯವೇ ಕಾರಣ ಎನ್ನಲಾಗುತ್ತಿದೆ.
“ಸಾವು ದುರದೃಷ್ಟಕರ. ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಪ್ರದೇಶದ ಕುಟುಂಬಗಳಿಗೆ ನಾವು ಕುಡಿಯುವ ನೀರು ಮತ್ತು ಒಆರ್ಎಸ್ ಪೂರೈಸುತ್ತಿದ್ದೇವೆ” ಎಂದು ವಾರ್ಡ್ ಸಂಯೋಜಕ ಮಲಾಕರ್ ಪಿಟಿಐಗೆ ತಿಳಿಸಿದರು.
ಕೆಎಂಸಿ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಫಿರ್ಹಾದ್ ಹಕೀಮ್ ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳಿಂದ ವರದಿ ಕೋರಿದ್ದಾರೆ.