ಮಾಜಿ ಸಚಿವ, ಹಿರಿಯ ಮುತ್ಸದ್ದಿ ಎಚ್.ಟಿ. ಕೃಷ್ಣಪ್ಪ ವಿಧಿವಶ!
ಮಾಜಿ ಸಚಿವ, ಹಿರಿಯ ಮುತ್ಸದಿ ಎಚ್.ಟಿ. ಕೃಷ್ಣಪ್ಪ (92 ) ಅವರು ಗುರುವಾರ ತಡರಾತ್ರಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಆಡಳಿತಾವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾಗಿದ್ದ ಇವರು, ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ರಾಮಕೃಷ್ಣ ಹೆಗಡೆಯವರ ಅನುಯಾಗಿದ್ದ ಇವರು, ಕಾಂಗ್ರೆಸ್ ಏತರ ಸರ್ಕಾರ ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಸಚಿವರಾಗಿದ್ದರು.
ಬೆಂಗಳೂರಿನಿಂದ ಇವರ ಮೃತ ಶರೀರವನ್ನು ನಾಗಮಂಗಲದ ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತಿದ್ದು, ನಾಗಮಂಗಲದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಗಾಜಿಯಾಬಾದ್ನಲ್ಲಿ ಮುಸ್ಲಿಂ ಹುಡುಗನನ್ನು ಥಳಿಸಿದ ವ್ಯಕ್ತಿಗೆ ಬೆಂಬಲಿಸಿದ್ರಾ ಗಜೇಂದ್ರ ಚೌಹಾಣ್!