ರಮೇಶ್ ಸಿಡಿಯನ್ನ ಹನಿ ಟ್ರ್ಯಾಪ್ ಅಂತ ಹೇಳಿದ್ರೆ ಹನಿ ತಿಂದವರು ಯಾರು? ಡಿಕೆಶಿ ಪ್ರಶ್ನೆ!
ವಿಧಾನಸಭಾ ಕಲಾಪದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಭರ್ಜರಿಯಾಗೇ ಸದ್ದು ಮಾಡುತ್ತಿದೆ.
ಹೌದು… ಇಂದಿನ ಕಲಾಪದಲ್ಲಿ ವಿಪಕ್ಷ ನಾಯಕರು ಒಬ್ಬರಾದ ಮೇಲೊಬ್ಬರು ಆಡಳಿತ ಪಕ್ಷಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ. ‘ಸಿಡಿ ಮಾಡುವಂತ ಮನೆಹಾಳ ಕೆಲಸ ಇನ್ಯಾರು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ನಲ್ಲಿ ನಾನು ಇದ್ದವನು. ಇದನ್ನು ಅವರೇ ಮಾಡಿದ್ದಾರೆಂದು’ ಹೇಳಿದ ಎಸ್.ಟಿ ಸೋಮಶೇಖರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ರಮೇಶ್ ಸಿಡಿಯನ್ನ ಹನಿ ಟ್ರ್ಯಾಪ್ ಅಂತ ಹೇಳಿದ್ರೆ ಹನಿ ತಿಂದವರು ಯಾರು…? ಹನಿ ತಿಂದದ್ದಕ್ಕೆ ತಾನೆ ಹನಿಟ್ರ್ಯಾಪ್ ಆಗಿದ್ದು ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಪ್ಯಾಂಟ್ ಬಗ್ಗೆ ನಾವು ಮಾತನಾಡಿಲ್ಲ. ಷಡ್ಯಂತ್ರ ಅಂತ ಹೇಳಿಲ್ಲ. ಮಾಧ್ಯಮದವರ ಹೆಸರು ಎಳೆಯುತ್ತಿಲ್ಲ. ಮಾಡೋದೆಲ್ಲ ಮಾಡಿ ನಾನೇನು ಮಾಡಿಲ್ಲ ಅಂತ ಹೇಳಿದ್ರೆ ಹೇಗೆ..? ಹುಡುಗಿ ಕುಟುಂಬಸ್ಥರು ಇರುವುದು ಬಿಜಾಪುರದಲ್ಲಿ ಇದ್ದಾರೆ. ಆದರೆ ಅವರು ಬೆಳಗಾವ್ ನಲ್ಲಿ ಹೋಗಿ ದೂರು ಯಾಕೆ ನೀಡಿದ್ದಾರೆ? ಎಂದು ಡಿಕೆ ಶಿವಕುಮಾರ್ ಕಟೂರವಾಗಿ ಪ್ರಶ್ನೆ ಮಾಡಿದ್ದಾರೆ.
ನಾವೇನಾದ್ರು ಮಾಡಿದರೆ ಹೇಳಲಿ ಜನರಿಗೆ ಗೊತ್ತಾಗಲಿ. ಆದರೆ ಈ ರೀತಿ ಸುಳ್ಳು ಹೇಳಿಕೆ ಕೊಡುವುದು ಬೇಡ. ತನಿಖೆ ಮಾಡಿ ಪೊಲೀಸರು ಚುರುಕಾಗಿ ವಿಚಾರ ಸತ್ಯ ಬಹಿರಂಗ ಪಡಿಸಲಿ ಎಂದು ಹೇಳಿದ್ದಾರೆ.