Bigg Boss : ‘ನನ್ನ ಜೀವನದಲ್ಲೇ ಅತೀ ಹೆಚ್ಚು ನೋವಾದ ದಿನ ಇದು’ – ಮಂಜು

ಬಿಗ್ ಬಾಸ್ ಮನೆಯ ಸ್ಪರ್ಧಿಯಾದ ಮಂಜು ಪಾವಗಡ ಮನೆಯ ಎಲ್ಲಾ ಸದಸ್ಯರ ಮುಂದೆ ಕ್ಷಮೆ ಕೇಳಿದ್ದಾರೆ. ತಾವು ಮಾಡಿದ್ದು ತಪ್ಪು ಹೀಗಾಗಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಮಂಜು ಮನೆಯ ಎಲ್ಲಾ ಸದಸ್ಯರ ಮುಂದೆ ಕ್ಷಮೆ ಕೇಳಿದ್ದು ಯಾಕೆ..?

ಮಂಜು ಪಾವಗಡ ಕಾಮಿಡಿ ಮಾಡುವುದರಲ್ಲಿ ಕರುನಾಡಿನಲ್ಲಿ ಮನೆ ಮಾತಾದವರು. ಬಿಗ್ ಬಾಸ್ ಮನೆಯಲ್ಲೂ ಮನೆಯ ಎಲ್ಲಾ ಸದಸ್ಯರೊಂದಿಗೆ ಕಾಮಿಡಿ ಮಾಡಿಕೊಂಡು ನಗಾಡಿಸುವುದರಲ್ಲಿ ಪಂಟರು. ಜೊತೆಗೆ ನಂಬಿಕಸ್ತ ವ್ಯಕ್ತಿ. ಎಂದಿಗೂ ಮೋಸದಾಟ ಆಡೋದಿಲ್ಲ ಎಂದು ನಂಬಿಕೆ ಉಳಿಸಿಕೊಂಡವರು. ಆದರೆ ಕಳೆದ ವಾರ ಅವರು ಆಡಿದ ಆಟ ಮನೆಯ ಎಲ್ಲಾ ಸದಸ್ಯರಿಗೂ ಬೇಸರ ತಂದಿತ್ತು.

ಮಂಜು ಮಾಡಿದ ತಪ್ಪೇನು..?

ಬಿಗ್ ಬಾಸ್ ನೀಡಿದ ಆಟ ಗೆಲ್ಲಲು ದಿವ್ಯ ಸುರೇಶ್ ಹಾಗೂ ನಿಧಿ ಸುಬ್ಬ ಮಾಡಿಕೊಂಡ ಒಪ್ಪಂದ ಗೊತ್ತಿದ್ದರೂ ಮಂಜು ಅದನ್ನ ತಡೆಯುವ ಪ್ರಯತ್ನ ಮಾಡಲಿಲ್ಲ. ದಿವ್ಯ ಒಪ್ಪಂದದ ಬಗ್ಗೆ ಮಂಜು ಬಳಿ ಹೇಳಿದರೂ ಮಂಜು ಅದನ್ನ ತಡೆಯುವ ಪ್ರಯತ್ನ ಮಾಡದೆ ಅದಕ್ಕೆ ಸಹಕರಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್ ಟಾಸ್ಕ್ ಗೆ ದಿವ್ಯ-ನಿಧಿ ಆಯ್ಕೆಯಾಗಿದ್ದರು. ಆದರೆ ಟಾಸ್ಕ್ ನಲ್ಲಿ ಸೋತರು. ಹೀಗಾಗಿ ಒಪ್ಪಂದದ ಮೂಲಕ ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆ ಆಗೆ ನಮಗೆ ಸಿಗಬೇಕಾದ ಅವಕಾಶ ತಪ್ಪಿ ಹೋಯ್ತು ಎಂದು ಮನೆಯ ಎಲ್ಲಾ ಸದಸ್ಯರು ಮೂರು ಜನರ ಮೇಲೆ ಕೋಪಗೊಂಡಿದ್ದರು.

ಹೀಗಾಗಿ ಮನೆಯ ಸದಸ್ಯರು ಈ ಮೂವರೊಂದಿಗೆ ಮಾತನಾಡಿರಲಿಲ್ಲ. ಬೇಸರಗೊಂಡ ಮಂಜು ” ನನ್ನ ಜೀವದಲ್ಲೇ ಮೊದಲ ಬಾರಿಗೆ ನನಗಿಷ್ಟು ನೋವಾಗಿದ್ದು. ನನ್ನ ತಪ್ಪಿನ ಬಗ್ಗೆ ನನಗೆ ಅರಿವಿದೆ. ಮುಂದೆ ಅಂತ ತಪ್ಪು ಮಾಡೋದಿಲ್ಲ” ಎಂದು ಕ್ಷಮೆ ಕೇಳಿದ್ದಾರೆ.

ಒಪ್ಪಂದವೇನು?

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಹುಡುಗರು ಹಾಗೂ ಹುಡುಗಿಯರನ್ನು ಹಾಸ್ಟಲ್ ಮಾಡುವ ಮೂಲಕ ವರ್ಗಾಯಿಸಲಾಗಿದೆ. ಇದರಲ್ಲಿ ‘ಬಿಗ್ ಬಾಸ್ ಬಾಯ್ಸ್ ಹಾಸ್ಟಲ್’ ಹುಡುಗರು ಹಾಗೂ ‘ಬಿಗ್ ಬಾಸ್ ಗರ್ಲ್ಸ್ ಹಾಸ್ಟಲ್’ ಹುಡುಗಿಯರಿಗೆ ಬಿಗ್ ಬಾಸ್ ಆಟವೊಂದನ್ನ ನೀಡಿದ್ದರು. ಈ ಆಟದಲ್ಲಿ ಬಿಗ್ ಬಾಸ್ ಬಾಯ್ಸ್ ಹಾಸ್ಟಲ್ ನ ಹುಡುಗರು ಗರ್ಲ್ಸ್ ಹಾಸ್ಟಲ್ ಹುಡುಗಿಯರಿಗೆ ಪ್ರೇಮ ಪತ್ರಗಳನ್ನು ಬರೆಯಬೇಕು. ಯಾರು ಹೆಚ್ಚು ಪತ್ರಗಳನ್ನು ಅರ್ಥಪೂರ್ಣವಾಗಿ ಬರೆಯುತ್ತಾರೋ ಜೊತೆಗೆ ಯಾರು ಅತೀ ಹೆಚ್ಚು ಪತ್ರಗಳನ್ನು ಪಡೆದುಕೊಳ್ಳುತ್ತಾರೋ ಮತ್ತು ಯಾವ ವಾರ್ಡನ್ ಅತೀ ಹೆಚ್ಚು ಪತ್ರಗಳನ್ನು ಪತ್ತೆ ಹಚ್ಚಿ ಸಂಗ್ರಹಿಸುತ್ತಾರೋ ಅವರು ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆಯಾಗುತ್ತಾರೆ.

ವಾರ್ಡನ್ ಗಳಾದ ಪ್ರಶಾಂತ್ ಹಾಗೂ ನಿಧಿ ಹಾಸ್ಟಲ್ ಹುಡುಗಿಯರು ಮತ್ತು ಹುಡುಗರು ಬಚ್ಚಿಟ್ಟ ಪತ್ರಗಳನ್ನು ಹುಡುಕಿ ಸಂಗ್ರಹಿಸಬೇಕು. ಹೀಗಾಗಿ ವಾರ್ಡನ್ ಗಳಿಗೆ ಗೊತ್ತಿಲ್ಲದಂತೆ ಮನೆಯ ಸ್ಪರ್ಧಿಗಳು ಪತ್ರಗಳನ್ನು ಬಚ್ಚಿಡುತ್ತಿದ್ದರು.

ಈ ವೇಳೆ ವಾರ್ಡನ್ ನಿಧಿ ದಿವ್ಯಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದಂತೆ ಮನೆಯ ಸದಸ್ಯರು ಬಚ್ಚಿಟ್ಟ ಪ್ರೇಮ ಪತ್ರಗಳ ಬಗ್ಗೆ ನಿಧಿ ಸುಬ್ಬಯ್ಯ ಅವರಿಗೆ ಮಾಹಿತಿ ನೀಡಿದರೆ, ದಿವ್ಯ ಸುರೇಶ್ ಪತ್ರಗಳನ್ನು ವಾರ್ಡನ್ ನಿಧಿ ವಶಪಡಿಸಿಕೊಳ್ಳುವುದಿಲ್ಲ. ಒಪ್ಪಂದದಂತೆ ಆಟ ನಡೆದು ಕ್ಯಾಪ್ಟನ್ ಟಾಸ್ಕ್ ಗೆ ಅರವಿಂದ್, ನಿಧಿ ಹಾಗೂ ದಿವ್ಯ ಆಯ್ಕೆ ಆದರು.

ಆದರೆ ಕ್ಯಾಪ್ಟನ್ ಟಾಸ್ಕ್ ನಲ್ಲಿ ಒಪ್ಪಂದ ಮಾಡಿಕೊಮಡಿದ್ದ ನಿಧಿ ಆಗಲಿ ದಿವ್ಯ ಆಗಲಿ ವಿನ್ ಆಗಲಿಲ್ಲ. ಬದಲಿಗೆ ಅರವಿಂದ್ ಆಯ್ಕೆ ಆದರು.

ಒಪ್ಪಂದ ಮನೆಯ ಇನ್ನೂಳಿದ ಸದಸ್ಯರಿಗೆ ಗೊತ್ತಾಗಿದ್ದು ಹೇಗೆ?

ಇಂದು ಮನೆಯ ಸದಸ್ಯರಿಗೆ ಬಿಗ್ ಬಾಸ್ ಪ್ರೇಕ್ಷರಿಂದ ಕರೆ ಬಂದಿತ್ತು. ಈ ವೇಳೆ ದಿವ್ಯ ಸುರೇಶ್ ನಿಧಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ.

ಇದನ್ನು ಅಲ್ಲಗಳಿದ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ದಿವ್ಯಾ, ಮಂಜು ಹಾಗೂ ನಿಧಿ ಮೇಲೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮಾತು ಕೂಡ ಅಷ್ಟಾಗಿ ಆಡಲಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights