ಮೋದಿಗೆ ಚುನಾವಣೆ ಗೆಲ್ಲಲು ಇರುವ ಉತ್ಸಾಹ ಕೊರೊನಾ ಗೆಲ್ಲುವುದರಲ್ಲಿ ಇಲ್ಲ: ಕಪಿಲ್‌ ಸಿಬಲ್‌

ಚುನಾವಣೆಯಲ್ಲಿ ಗೆಲ್ಲಲು ಉತ್ಸಾಹ ತೋರಿಸುರವ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್‌ ವಿರುದ್ಧದ ಹೋರಾಟವನ್ನು ಗೆಲ್ಲಲು ಅದೇ ಉತ್ಸಾಹವನ್ನು ಏಕೆ ತೋರಿಸುತ್ತಿಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ.

COVID-19 ಎರಡನೇ ಅಲೆಯಿಂದಾಗಿ ದೇಶವು ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆದರೆ, ಕೇಂದ್ರ ಸರ್ಕಾರದ ನೇತೃತ್ವ ವಹಿಸಿರುವ ಮೋದಿಯವರು ತಮ್ಮ ಜವಾಬ್ದಾರಿಯನ್ನು ಮರೆತು, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿದ್ದಾರೆ ಎಂದು ಸಿಬಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಅವರೇ, ಚುನಾವಣೆಯಲ್ಲಿ ಗೆಲಲ್ಲು ತೊಳ್ಬಲ, ಕಂಠಬಲ, ಸಂಪನ್ಮೂಲವನೆಲ್ಲಾ ಬಳಸುತ್ತೀರಿ, ನಮ್ಮ ಜನರಿಗಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಏಕೆ ಅದೇ ಉತ್ಸಾಹ ತೋರುತ್ತಿಲ್ಲ ಎಂದು ಸಿಬಿಲ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ಜನರು ಸಾಂಕ್ರಾಮಿಕ ರೋಗದಿಂದ ಸಾಯುತ್ತಿದ್ದಾರೆ. ಒಬ್ಬ ನಾಗರಿಕನಾಗಿ ಮೋದಿಗೆ ಹೇಳುವುದೇನೆಂದರೆ, ಚುನಾವಣಾ ರ್ಯಾಲಿಗಳು ಉತ್ತಮವಾಗಿವೆ, ವಿಜಯಗಳು ದೈವಿಕವಾಗಿವೆ. ಆದರೆ ನೀವು ಹೋರಾಡುತ್ತಿರುವ ಯುದ್ಧಗಳು ನಿಜವಾಗಿಯೂ ನನ್ನದಲ್ಲ!” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶವ ವಾಹನಗಳ ಮುಂದೆ ಬಿಜೆಪಿ ಮುಖಂಡರ ಫೋಟೋಶೂಟ್‌; ನಾಚಿಕೆಗೇಡು ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights