ಶವ ವಾಹನಗಳ ಮುಂದೆ ಬಿಜೆಪಿ ಮುಖಂಡರ ಫೋಟೋಶೂಟ್; ನಾಚಿಕೆಗೇಡು ಎಂದ ಕಾಂಗ್ರೆಸ್!
ಮಧ್ಯಪ್ರದೇಶದಲ್ಲಿ ವಿವಾದವೊಂದು ಭುಗಿಲೆದ್ದಿದೆ. ಕೊರೊನಾದಿಂದ ಹೆಚ್ಚು ಜನರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಕೊರತೆಯಿಂದ ಶವಗಳನ್ನು ಸಾಗಿಸಲು ಬಿಜೆಪಿ ಮುಖಂಡರೊಬ್ಬರು ಆರು ಮಿನಿ ಟ್ರಕ್ಗಳನ್ನು ನೀಡಿದ್ದಾರೆ. ಆದರೆ, ಟ್ರಕ್ಗಳ ಮುಂದೆ ಬಿಜೆಪಿ ಮುಖಂಡರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಘಟನೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ‘ನಾಚಿಕೆಯಿಲ್ಲದ ಫೋಟೋಶೂಟ್’ ಎಂದು ಕರೆದಿದೆ.
ಮೃತ ದೇಹವನ್ನು ಹೊತ್ತೊಯ್ಯುವ ಈ “ಶವ ವಾಹನ”ಗಳಲ್ಲಿ ಒಂದನ್ನು ಫೋಟೋಶೂಟ್ಗಾಗಿ ನಿಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಇಂದೋರ್ನ ಆಮ್ಲಜನಕ ಟ್ಯಾಂಕರ್ನ ಮುಂದೆ ರಾಜ್ಯ ಸಚಿವ ತುಳಸಿರಾಮ್ ಸಿಲಾವತ್ ಮತ್ತು ಅವರ ಬೆಂಬಲಿಗರು ತೆಂಗಿನಕಾಯಿ ಒಡೆದು ಪಾದ್ರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಶವ ವಾಹನಗಳ ಎರಡು ವೀಡಿಯೊಗಳು ವೈರಲ್ ಅಗಿವೆ. ಅವುಗಳಲ್ಲಿ ಒಂದರಲ್ಲಿ, ಮಾಜಿ ಭೋಪಾಲ್ ಮೇಯರ್ ಮತ್ತು ಬಿಜೆಪಿ ನಾಯಕ ಅಲೋಕ್ ಶರ್ಮಾ ಅವರು ಆರು “ಶವ ವಾಹನ”ಗಳನ್ನು ವಿವಿಧ ಆಸ್ಪತ್ರೆಗಳಿಗೆ ಹಸ್ತಾಂತರಿಸುವುದನ್ನು ಫೋಟೋಶೂಟ್ ಮಾಡುತ್ತಿರುವುದು ಕಂಡುಬಂದಿದೆ.
ಒಂದು ವಿಡಿಯೋ ತುಣುಕಿನಲ್ಲಿ, ಹೂವುಗಳಿಂದ ಅಲಂಕರಿಸಲ್ಪಟ್ಟ ವಾಹನಗಳೊಂದಿಗೆ ಶರ್ಮಾ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ, ಒಂದು ಶವವನ್ನು ಹೊತ್ತು ಹೋಗುತ್ತಿದ್ದ ವ್ಯಾನ್ಅನ್ನು ವೀಡಿಯೊ ಶೂಟ್ಗಾಗಿ ನಿಧಾನವಾಗಿ ಚಲಿಸುವಂತೆ ಚಾಲಕನಿಗೆ ಹೇಳಲಾಗುತ್ತದೆ. ಆದರೆ, ಈ ಕ್ಲಿಪ್ನಲ್ಲಿ ಶರ್ಮಾ ಕಾಣಿಸುವುದಿಲ್ಲ.
“ಶವ ವಾಹನಗಳ” ಕೊರತೆ ಬಗ್ಗೆ ವರದಿಗಳನ್ನು ಓದಿದ ನಂತರ ನಾನು ಈ ವಾಹನಗಳನ್ನು ಖರೀದಿಸಿದೆ. ನಾನು ಈ ವಾಹನಗಳನ್ನು ಸಂಬಂಧಪಟ್ಟ ಆಸ್ಪತ್ರೆಯ ನಿರ್ವಹಣೆಗೆ ಹಸ್ತಾಂತರಿಸುವಾಗ ಮಾಧ್ಯಮ ವ್ಯಕ್ತಿಗಳು ಹಾಜರಿದ್ದರು. ಅವರು ಫೋಟೋ ತೆಗೆದಿದ್ದಾರೆ”ಎಂದು ಹೇಳಿರುವ ಶರ್ಮಾ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: Facebook-BJP ಒಲವು: ಬಿಜೆಪಿ ಸಂಸದ ಭಾಗಿಯಾಗಿದ್ದಕ್ಕೆ ನಕಲಿ ಖಾತೆ ಬ್ಯಾನ್ ಮಾಡದ ಫೇಸ್ಬುಕ್!
ತಮ್ಮ ವಿರುದ್ಧದ ಮಾಡಲಾಗಿರುವ ಆರೋಪಗಳು “ವಿವಾದವನ್ನು ಹುಟ್ಟುಹಾಕಲು ಕಾಂಗ್ರೆಸ್ ಮಾಡಿದ ಕೊಳಕು ರಾಜಕೀಯ” ಎಂದು ಅವರು ಹೇಳಿದ್ದಾರೆ.
“ಈ ವಾಹನಗಳ ವ್ಯವಸ್ಥೆಗಾಗಿ ನಾನಗೆ ಪದೇ ಪದೇ ಫೋನ್ ಕರೆಗಳ ಬಂದಿವೆ. ಶವ ವಾಹನಗಳ ಕೊರತೆಯಿಂದಾಗಿ ಈ ವಾಹನಗಳು ಜನರು ತಮ್ಮ ಸಂಬಂಧಿಕರ ಶವಗಳನ್ನು ಸಾಗಿಸಲು ಕಾಯಬೇಕಾಗಿವೆ “ಎಂದು ಅವರು ತಿಳಿಸಿದ್ದಾರೆ.
ಈ ವಾಹನಗಳನ್ನು ಜೆಪಿ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ) ಕ್ಯಾಂಪಸ್ಗೆ ಹಸ್ತಾಂತರಿಸುವಾಗ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದು ಶವವನ್ನು ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. “ನಾನು ವಾಹನವನ್ನು ಆಸ್ಪತ್ರೆಯ ನಿರ್ವಹಣೆಗೆ ಒಪ್ಪಿಸಿದೆ. ನಂತರ, ಜೆಪಿ ಆಸ್ಪತ್ರೆ ಒಂದು ವಾಹನವನ್ನು ಆ ವ್ಯಕ್ತಿಗೆ ಸಂಬಂಧ ಪಟ್ಟವರ ಶವವನ್ನು ಸಾಗಿಸಲು ನೀಡಿತು. ಮೃತ ದೇಹವನ್ನು ಹೊತ್ತ ವಾಹನವು ಅಲ್ಲಿಂದ ಮಾಧ್ಯಮಗಳ ಸಮ್ಮುಖದಲ್ಲಿ ಹಾದುಹೋಯಿತು” ಎಂದು ಶರ್ಮಾ ಹೇಳಿದ್ದಾರೆ.
शर्म करो बेशर्मों…?
इंदौर में ऑक्सीजन के टैंकर को घंटो रोककर भाजपा नेताओ ने ख़ूब फ़ोटो बाज़ी की और अब भोपाल में भाजपा के पूर्व महापौर आलोक शर्मा शव वाहनो के साथ फ़ोटो बाज़ी करते हुए ?
इंदौर में बन रहे कोविड केयर सेंटर पर भाजपा नेताओ का दौरा ?
आपदा में भी अवसर-फ़ोटो बाज़ी ? pic.twitter.com/xz51GCmtcF
— Narendra Saluja (@NarendraSaluja) April 19, 2021
ಮತ್ತೊಂದೆಡೆ, ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಈ ಘಟನೆಯನ್ನು “ನಾಚಿಕೆಗೇಡಿನ ಕೃತ್ಯ” ಎಂದು ಬಣ್ಣಿಸಿದ್ದಾರೆ.
“ಈ ಹಿಂದೆ, ಬಿಜೆಪಿ ನಾಯಕರು ಇಂದೋರ್ನಲ್ಲಿ ಆಮ್ಲಜನಕ ಟ್ಯಾಂಕರ್ ಅನ್ನು ಪೂಜಿಸಿದ್ದರು ಮತ್ತು ಅದನ್ನು ಮಾರ್ಗಮಧ್ಯೆ ನಿಲ್ಲಿಸಿದ್ದರು. ಈಗ, ಮತ್ತೊಬ್ಬ ನಾಯಕ ಶಾವ ವಾಹನದ ಮುಂದೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ, ಮಂತ್ರಿಯೊಬ್ಬರು ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದರು. ಅವರು ಫೋಟೋ ಶೂಟ್ಗಾಗಿ ಕಾತುರರಾಗಿದ್ದಾರೆ” ಎಂದು ಸಲೂಜಾ ಟೀಕಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಪಡೆದಿದ್ದರೂ ಭಾರತದ ಪ್ರವಾಸ ರದ್ದುಗೊಳಿಸಿ; ಪ್ರಜೆಗಳಿಗೆ ಅಮೆರಿಕಾ ಎಚ್ಚರಿಕೆ!