130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ; ಕೇಂದ್ರ ಸಚಿವರ ವಿರುದ್ಧ ಚಿದಂಬರಂ ಕಿಡಿ
130 ಕೋಟಿ ಜನರನ್ನು ಹೊತ್ತ ಹಡಗು (ಭಾರತ) ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಕಿಡಿಕಾರಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಟ್ವೀಟ್ ಗೆ (ಈಗ ಆರೋಗ್ಯ ಸಚಿವರ ಟ್ವೀಟ್ ಅಳಿಸಲಾಗಿದೆ) ಪ್ರತಿಕ್ರಿಯೆ ನೀಡುತ್ತಿರುವುದಾಗಿ ಹೇಳಿ ಟ್ವೀಟ್ ಮಾಡಿರುವ ಅವರು, ‘ ಮೇ ಡೇ! ಮೇ ಡೇ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ, ಕನಿಷ್ಠ ಪಕ್ಷ ನನ್ನನ್ನಾದರೂ ಉಳಿಸಿ’ ಎಂದು ಪೋಸ್ಟ್ ಮಾಡಿದ್ದಾರೆ.
Re-tweeting Health Minister (his original tweet was invisible)
“May Day! May Day!
The Ship IN 2021 with 130 cr on board is sinking.Save Us! At least Save Me!”
— P. Chidambaram (@PChidambaram_IN) May 1, 2021
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 3,523 ಸಾವು ವರದಿಯಾಗಿದೆ. ಇದರ ಜೊತೆಗೆ ದೇಶದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಾಗಿರುವ ಹಿನ್ನಲೆಯಲ್ಲಿ ಚಿದಂಬರಂ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.