ವಕೀಲನ ಡೆತ್ ನೋಟ್ ನಿಂದ ಬಯಲಾಯ್ತು ಯೋಗ ಶಿಕ್ಷಕರ ಕೊಲೆ ರಹಸ್ಯ…!

ವಕೀಲನ ಡೆತ್ ನೋಟ್ ನಿಂದಾಗಿ ಯೋಗ ಶಿಕ್ಷಕರ ಕೊಲೆ ರಹಸ್ಯ ಬಯಲಾದ ವಿಚಿತ್ರ ಘಟನೆ ಮಧುರೈನಲ್ಲಿ  ನಡೆದಿದೆ.

ಮಧುರೈನಲ್ಲಿ 10 ವರ್ಷದ ಮಗಳೊಂದಿಗೆ ವಾಸವಿದ್ದ ವಕೀಲ ಹರಿಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡ ವಕೀಲ. ಇವರು ಕಳೆದ ಮಂಗಳವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರ ಮೃತದೇಹದೊಂದಿಗೆ ಡೆತ್ ನೋಟ್ ಕೂಡ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಈ ಸ್ಥಳದಿಂದ ಸಿಕ್ಕ ಡೆತ್ ನೋಟ್ ನಿಂದ  ಕಾಣೆಯಾದ ಯೋಗ ಶಿಕ್ಷಕರ ಪ್ರಕರಣವನ್ನು ಪರಿಹರಿಸಲು ಸಾಧ್ಯವಾಗಿದೆ.

ಯೋಗ ಶಿಕ್ಷಕಿಯಾಗಿದ್ದ ಚಿತ್ರದೇವಿ ಏಪ್ರಿಲ್ 2 ರಂದು ಮಧುರೈನ ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಏಪ್ರಿಲ್ 5 ರಂದು ಪೊಲೀಸರಿಗೆ ದೂರು ನೀಡಿದ್ದರು.

ಚಿತ್ರದೇವಿಯ ತಂದೆ ಕನ್ನಯ್ಯ ಅವರು ಮಧುರೈ ಎಸ್‌ಪಿ ತಿರುಮಂಗಲಂ ಪೊಲೀಸರಿಗೆ ದೂರು ನೀಡಿದ್ದು, ಮಗಳು ಚಿತ್ರದೇವಿ ಮತ್ತು ಹರಿಕೃಷ್ಣನ್ ನಡುವಿನ ಸಂಭಾಷಣೆಯ ಆಡಿಯೋ ತುಣುಕುಗಳನ್ನು ನೀಡಿ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಿಎಂ ಸೆಲ್‌ಗೆ ದೂರು ರವಾನಿಸಿದ್ದರು.

ದೂರು ಮತ್ತು ಒದಗಿಸಿದ ಮಾಹಿತಿಯ ಮೇರೆಗೆ ಪೊಲೀಸರು ತನಿಖೆ ಪ್ರಾರಂಭಿಸಿದರು. ಅದಾಗಲೇ ಹರಿಕೃಷ್ಣನ್ ಮಧುರೈನ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಡೆತ್ ನೋಟನಲ್ಲ  ಹರಿಕೃಷ್ಣನ್ ಅವರು ಚಿತ್ರದೇವಿಯನ್ನು ಕೊಂದು ಅವಳನ್ನು ತಮ್ಮ ಸ್ನಾನಗೃಹದಲ್ಲಿ ಸಮಾಧಿ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

ತಪ್ಪನ್ನು ಸಹಿಸಲಾಗದೆ, ಅವರು ತಮ್ಮ ಪ್ರಾಣವನ್ನು ತೆಗೆದುಕೊಳ್ಳಲು ನಿರ್ಧರಿಸಿದರು ಎಂದು ಡೆತ್ ನೋಡ್ ನಲ್ಲಿ ಬರೆಯಲಾಗಿದೆ. ಆದರೆ ಯೋಗ ಶಿಕ್ಷಕಿಯಾಗಿದ್ದ ಚಿತ್ರದೇವಿಯನ್ನು ಕೊಲ್ಲಲು ಕಾರಣವೇನೆಂದು ಪೊಲೀಸರು ಬಹಿರಂಗಪಡಿಸಿಲ್ಲ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights