ಜಮೀನಿನಲ್ಲಿ ಸಿಕ್ಕಿತು ವಜ್ರ; ಒಂದೇ ದಿನದಲ್ಲಿ ಕೊಟ್ಯಾಧಿಪತಿಯಾದ ರೈತ!
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ರೈತರೊಬ್ಬರಿಗೆ ತನ್ನ ಕೃಷಿ ಜಮೀನಿನಲ್ಲಿ ವಜ್ರವೊಂದು ಸಿಕ್ಕಿದೆ. ವರದಿಗಳ ಪ್ರಕಾರ, ರೈತ ವಜ್ರವನ್ನು ಸ್ಥಳೀಯ ವ್ಯಾಪಾರಿಯೊಬ್ಬರಿಗೆ 1.25 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲೆಯ ತುಗ್ಗಲಿ ಮಂಡಲದ ಚಿನ್ನ ಜೊನ್ನಗಿರಿ ಗ್ರಾಮದ ರೈತ ತನ್ನ ಜಮೀನನ್ನು ಉಳುಮೆ ಮಾಡುವಾಗ ಜಮೀನಿನಲ್ಲಿ ವಜ್ರವು ಪತ್ತೆಯಾಗಿದೆ. 30 ಕ್ಯಾರೇಟ್ ಇರುವ ಆ ವಜ್ರದ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಸುಮಾರು 3 ಕೋಟಿ ರೂ. ಎಂದು ತಿಳಿದು ಬಂದಿದೆ.
ರೈತನಿಗೆ ವಜ್ರ ದೊರೆತಿರುವ ಸಿದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಕರ್ನೂಲ್ ಜಿಲ್ಲೆಯಲ್ಲಿ ಈ ರೀತಿ ವಜ್ರಗಳು ಪತ್ತೆಯಾಗುವುದು ಇದೇ ಮೊದಲೇನು ಅಲ್ಲ. ಪ್ರತಿವರ್ಷ ನೂರಾರು ಜನರು ಮಾನ್ಸೂನ್ ಆರಂಭದಲ್ಲಿ ಜಮೀನಿನಲ್ಲಿ ವಜ್ರಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವಂಚನೆ ಆರೋಪಿ ವಜ್ರ ವ್ಯಾಪಾರಿ ಚೋಕ್ಸಿ; ಭಾರತಕ್ಕೆ ನೇರ ಹಸ್ತಾಂತರ ಸಾಧ್ಯವಿಲ್ಲ: ಡೊಮಿನಿಕಾ ಪ್ರಧಾನಿ