ರೆಬೆಲ್ ಸ್ಟಾರ್ ಅಂಬರೀಷ್ ಗಿಂದು 69ನೇ ಹುಟ್ಟುಹಬ್ಬ : ಸಂಭ್ರಮಾಚರಣೆ ಬೇಡ ಎಂದು ಸುಮಲತಾ ಮನವಿ!
ಮಂಡ್ಯದ ಗಂಡು, ಕಲಿಯುಗದ ಕರ್ಣ, ಮೇರು ವ್ಯಕ್ತಿತ್ವದ ರೆಬೆಲ್ ಸ್ಟಾರ್ ಅಂಬರೀಷ್ ಗಿಂದು 69ನೇ ಹುಟ್ಟುಹಬ್ಬ. ಅವರು ಜನ್ಮದಿನದಂದು ಕನ್ನಡ ನಾಡು-ನುಡಿಗೆ ಸಲ್ಲಿಸಿರುವ ಅವರ ಸೇವೆಯನ್ನು ಸ್ಮರಿಸುವ ದಿನ. ಅವರ ನೆನಪು, ಅವರ ವ್ಯಕ್ತಿತ್ವ, ಅವರು ಮಾಡಿರುವ ಪಾತ್ರಗಳ ಮೂಲಕ ಅಂಬರೀಶ್ ಕರುನಾಡಿನ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.
2018ರಂದು ರೆಬೆಲ್ ಸ್ಟಾರ್ ಅಂಬರೀಷ್ ಮೃತಪಟ್ಟಿದ್ದರು. ಇದು ಕರ್ನಾಟಕದ ಜನತೆಗೆ ಅಘಾತ ಉಂಟು ಮಾಡಿತ್ತು. ಅವರು ನಮ್ಮನ್ನು ಅಗಲಿ ಎರಡು ವರ್ಷವೇ ಕಳೆದಿದೆ. ಅವರು ಇಲ್ಲದೆಯೇ ಮೂರನೇ ಬಾರಿಗೆ ಅವರ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿಲ್ಲ.
ಕೊರೊನಾ ಕಾರಣದಿಂದಾಗಿ ಎಲ್ಲರೂ ತತ್ತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
https://twitter.com/sumalathaA/status/1398302324439740417?ref_src=twsrc%5Etfw%7Ctwcamp%5Etweetembed%7Ctwterm%5E1398302324439740417%7Ctwgr%5E%7Ctwcon%5Es1_&ref_url=https%3A%2F%2Fkannada.news18.com%2Fnews%2Fentertainment%2Fhappy-birthday-ambareesh-sumalatha-requested-fans-not-to-celebrate-his-birthday-this-year-ae-570715.html
ಈ ಬಗ್ಗೆ ಸಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. 1917ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅಂಬರೀಷ್ ರಾಜಕೀಯದಲ್ಲೂ ಸಕ್ರಿಯರಾಗಿದ್ದರು.
ಇಂದು ಸುಮಲತಾ ಅಂಬರೀಷ್ ಹಾಗೂ ಅಭಿಷೇಕ್ ಅಂಬರೀಷ್ ಅವರು ಕಂಠೀರವ ಸ್ಟುಡಿಸೋದಲ್ಲಿರುವ ಅಂಭಿ ಸಮಾಧಿಗೆ ಪೂಜ ಸಲ್ಲಿಸಲಿದ್ದಾರೆ. ಎನ್ನಲಾಗುತ್ತಿದೆ.