Bigg Boss : ಸಂಬರಗಿ ಸಾಂಬರ್ ನ ಸಮಸ್ಯೆಗಳು : ಶಮಂತ್, ರಘು ಕೀಟಲೆ ಮಾಡಿದ್ದು ಹೀಗೆ..

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಬಾರಿ ಹುಡುಗೀಯರೇ ಅಡುಗೆ ಮಾಡ್ಬೇಕು ಹುಡುಗರೂ ಕೂಡ ಅಡುಗೆ ಕೆಲಸ ವಹಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳಿದ್ದವು. ಆದರೆ ಈ ಮಾತುಗಳಿಗೆ ಕಡಿವಾಣ ಹಾಕಲು ಪ್ರಶಾಂತ ಸಂಬರಗಿ ಮತ್ತು ಹುಡುಗರ ಟೀಮ್ ಸೇರಿ ಅಡುಗೆ ಮಾಡಿದ್ದಾರೆ.

ಹೌದು… ಪ್ರಶಾಂತ್ ಸಂಬರಗಿ ನಿನ್ನೆ ಬಿಗ್ ಬಾಸ್ ಮನೆಯ ಸಂಪೂರ್ಣ ಅಡುಗೆ ಕೆಲಸವನ್ನು ವಹಿಸಿಕೊಂಡಿದ್ದು, ಇನ್ನುಳಿದ ಹುಡುಗರು ಸಹಾಯ ಮಾಡಿದ್ದಾರೆ. ಈ ವೇಳೆ ಶಮಂತ್ ಮತ್ತು ರಘು ‘ಸಂಬರಗಿ ಸಾಂಬರ್ ಮಾಡುವ ಸಮಸ್ಯೆಗಳು’ ಎನ್ನುವ ಟೈಟಲ್ ನೊಂದಿಗೆ ಪ್ರಶಾಂತ್ ಸಾಂಬರ್ ಬಗ್ಗೆ ಕೀಟಲೆ ಮಾಡಿದ್ದಾರೆ.

“ಪ್ರಶಾಂತ ಸಂಬರಿಗಿ ಅವರು ಸಂಬಾರ್ ಮಾಡುವಾಗ ಗ್ಯಾಸ್ ಹಚ್ಚಿದರು, ಹಚ್ಚಿ ಹುಬ್ಬನ್ನು ಏರಿಸಿ ಅಬ್ಬಾ ಎಂದರೂ. ಎಲ್ಲವೂ ಮುಗಿದ ನಂತರ ಅಬ್ಬಬ್ಬಾ ಎಂದರು. ಸಾಂಬರ್ ತಿಂದ ಮನೆಯ ಸದಸ್ಯರು ವಾರೆವಾ.. ಎಂದು ಮನಸಿನಲ್ಲಿ ಅಂದುಕೊಂಡು ಹೊರಗೆ ಚೆನ್ನಾಗಿಲ್ಲ ಎಂದರು” ಹೀಗೆ ರಘು ಹಾಗೂ ಶಮಂತ್ ಪ್ರಶಾಂತ್ ಸಾಂಬರ್ ಬಗ್ಗೆ ಕೀಟಲೆ ಮಾಡಿದ್ದಾರೆ.

ಅಡುಗೆ ಬಳಿಕೆ ಮನೆಯ ಮಹಿಳೆಯರು ಕೂಡ ಪ್ರಶಾಂತ ಅಡುಗೆ ಬಗ್ಗೆ ಒಬ್ಬೊಬ್ಬರೂ ಒಂದೊಂದು ಕಾಮೆಂಟ್ ಪಾಸ್ ಮಾಡಿದ್ದಾರೆ. ಊಟದ ಬಳಿಕ ವೈಷ್ಣವಿಗೆ  ರಸಂ, ಸಾಂಬರ್, ಸೂಪ್ ಒಟ್ಟಿಗೆ ತಿಂದ ಭಾಸವಾದರೆ, ದಿವ್ಯ ಸುರೇಶ್ ಗೆ ಸಾಂಬರ್ ತುಂಬಾ ಚೆನ್ನಾಗಿತ್ತಂತೆ. ಇದನ್ನ ಸುದೀಪ್ ಮುಂದೆ ಹಂಚಿಕೊಂಡ ವೈಷ್ಣವಿ ನಾನು ಫೋರ್ ಇನ್ ಒನ್ ಸಾಮಾಂರ್ ತಿಂದೆ ಎಂದು ಕಾಮೆಂಟ್ ಮಾಡಿದರು.

ಜೊತೆಗೆ ಮಂಜು ಕೂಡ ಮಾತನಾಡಿ, ಚೆನ್ನಾಗಿಲ್ಲ ಅಂತಲೇ ರೈಸ್ ಖಾಲಿ ಆಗಿತ್ತು ಎಂದು ಟಾಂಗ್ ಕೊಟ್ರು. ಆದರೆ ಸುದೀಪ್ ಬೇರೆ ಆಪ್ಶನ್ ಇಲ್ದೆ ಇದ್ದಾಗ ರೈಸ್ ಸಾಂಬಾರ್ ತಿನ್ಲೇಬೇಕು ಎಂದು ಟಾಂಗ್ ಕೊಟ್ಟರು.

ಹೀಗೆ ಪ್ರಶಾಂತ್ ಸಂಬರಿಗೆ ಮಾಡಿದ ಸಾಂಬಾರ್ ವೀಕೇಂಡ್ ನಲ್ಲಿ ತಮಾಷೆ ಮಾತಾಗಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights