ಕ್ವಾಟ್ರಾಸ್ಗೆ ಕರೆದೊಯ್ದು ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ; ಅರಣ್ಯಾಧಿಕಾರಿ ಬಂಧನ!
ಸರ್ಕಾರಿ ಅಧಿಕಾರಿಯೊಬ್ಬ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಮಲ್ಕಂಗಿರಿ ಪ್ರದೇಶದಲ್ಲಿ ನಡೆದಿದೆ.
ಅರಣ್ಯಾಧಿಕಾರಿ ಮುರುಳೀಧರ್ ಎಂಬಾತ ಈ ಕೃತ್ಯ ಎಸಗಿದ್ದು, ಆತನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಆರೋಪಿ ಮುರಳೀಧರ್ ಯುವತಿಯನ್ನು ತನ್ನ ಕ್ವಾರ್ಟರ್ಸ್ಗೆ ಕರೆಸಿಕೊಂಡಿದ್ದಾನೆ. ನೀನು ಬಹಳ ಸುಂದರವಾಗಿದ್ದೀಯ, ನಿನ್ನಂತಹ ಯುವತಿಯನ್ನೇ ನಾನು ಮದುವೆ ಆಗಬೇಕೆಂದುಕೊಂಡಿದ್ದೆ. ನೀನು ಒಪ್ಪಿದರೆ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿಸಿದ್ದಾನೆ.
ಕೆಲವು ದಿನಗಳ ಹಿಂದೆ ಮುರಳೀಧರ ಮತ್ತೊಂದು ಮದುವೆ ಆಗಿದ್ದು, ತನಗೆ ವಂಚಿಸಿದ್ದಾನೆ ಎಂದು ತಿಳಿದ ನಂತರ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುರಳೀಧರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಮಾಯಕರನ್ನು ಹಿಂಸಿಸುವ ಬಿಜೆಪಿ ನಾಯಕರನ್ನು ವಜಾಗೊಳಿಸಬೇಕು: ದಿಗ್ವಿಜಯ್ ಸಿಂಗ್