ಶಾಸಕ ಯತ್ನಾಳ್ ಟೀಂ ವಿರುದ್ಧ ಎಂ.ಪಿ ರೇಣುಕಾಚಾರ್ಯ ಬಣ ಬಿಗ್ ಪ್ಲ್ಯಾನ್..!

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸದಿದ್ದರೆ ರಾಜ್ಯದಲ್ಲಿ ಪಕ್ಷಕ್ಕೆ ಉಳಿಗಾಲವಿರಲ್ಲ ಎಂದು ಆರೋಪಿಸುತ್ತಲೇ ಇರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಾಯಿಗೆ ಬೀಗ್ ಹಾಕಲು ಶಾಸಕ ಎಂ.ಪಿ ರೇಣುಕಾಚಾರ್ಯ ಬಣ ಬಿಗ್ ಪ್ಲ್ಯಾನ್ ಮಾಡಿದೆ.

ಹೌದು… ವಲಸೆ ಬಿಜೆಪಿಗರ ಮೂಲಕ ಬಿಜೆಪಿ ಆಡಳಿತ ಬಂದಾಗಿನಿಂದಲೂ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಎಂಎಲ್ಸಿ ಹೆಚ್. ವಿಶ್ವನಾಥ್ ಹಾಗೂ ಸಿಪಿ ಯೋಗೇಶ್ವರ್ ಪಕ್ಷದ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಇವರ ಬಾಯಿಗೆ ಬೀಗ ಹಾಕಲು ಸದ್ಯ ಎಂ.ಪಿ ರೇಣುಕಾಚಾರ್ಯ ಟೀಂ ತಂತ್ರ ರೂಪಿಸಿದೆ.

ಸಿಎಂ ವಿರೋಧಿಗಳ ವಿರುದ್ಧ ದೂರು?

ನಿತ್ಯ ಮಾಧ್ಯಮದ ಮುಂದೆ ಬಹಿರಂಗವಾಗಿ ‘ಸಿಎಂ ಬದಲಾಗಬೇಕು’ ಎನ್ನುವ ಸ್ವಪಕ್ಷಿಯದವರ ವಿರುದ್ಧವೇ ಸದ್ಯ ಕಾರ್ಯ ತಂತ್ರ ಹೆಣಿಯಲಾಗುತ್ತಿದೆ. ಯತ್ನಾಳ್ ವಿಶ್ವನಾಥ್ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.

ಸಿಎಂ ಯಡಿಯೂರಪ್ಪ ಅವರ ಬಗ್ಗೆ ಬೀದಿಯಲ್ಲಿ ಮಾತನಾಡುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಹೆಚ್. ವಿಶ್ವನಾಥ್ ಹಾಗೂ ಸಿಪಿ ಯೋಗೇಶ್ವರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ರೇಣುಕಾಚಾರ್ಯ ಹೈಕಮಾಂಡ್ ಮುಂದೆ ಬೇಡಿಕೆ ಇಡುವ ಸಾಧ್ಯತೆ ಇದೆ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ಸಿಎಂ ಆಪ್ತರು ಸಭೆ ನಡೆಸಲಿದ್ದು ಬಳಿಕ ಮುಂದಿನ ವಾರ ದೆಹಲಿಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ.

ಸಿಎಂ ವಿರುದ್ಧ ವಿಶ್ವನಾಥ್ ಹಾಗೂ ಯತ್ನಾಳ್ ಸತತ ವಾಗ್ವಾದ ನಡೆಸುತ್ತಿದ್ದಾರೆ. ಹೀಗಾಗಿ ಯತ್ನಾಳ್, ರೇಣುಕಾಚಾರ್ಯ ಬಣ ಬಡಿದಾಟ ಶುರುವಾಗಿದೆ. ಹೈಕಮಾಂಡ್ ಗೆ ದೂರು ನೀಡುವ ಮೂಲಕ ಪಕ್ಷದಲ್ಲಿರುವ ಸಿಎಂ ವಿರೋಧಗಳ ಬಾಯಿ ಮುಚ್ಚಿಸುವ ತಂತ್ರ ಹೆಣೆಯಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights