ಸಾಲ ಕೇಳಿದಕ್ಕೆ ವೃದ್ಧಳನ್ನು ಕೊಂದು ಚರಂಡಿಗೆ ಎಸೆದ ದಂಪತಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಸಾಲ ಕೇಳಿದಕ್ಕೆ ವೃದ್ಧಳನ್ನು ದಂಪತಿಗಳು ಕೊಂದು ದೇಹವನ್ನು ಚರಂಡಿಗೆ ಎಸೆದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕವಿತಾ (72) ಕೊಲೆಯಾದ ವೃದ್ಧ ಮಹಿಳೆ. ನಜಾಫ್ಗಢದ ಅನಿಲ್ ಆರ್ಯ ದಂಪತಿ ನೆರೆಯ ಕವಿತಾಳಿಂದ 1.5 ಲಕ್ಷ ಸಾಲ ಪಡೆದಿದ್ದರು. ಈವೆಂಟ್ ಮ್ಯಾನೇಜ್ಮೆಂಟ್ ವೃತ್ತಿಪರ ಅನಿಲ್ ಆರ್ಯ ಮತ್ತು ಅವರ ಪತ್ನಿಗೆ ಕವಿತಾ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾಳೆ. ಇದರಿಂದಾಗಿ ದಂಪತಿ ಜೂನ್ 30 ರಂದು ರಾತ್ರಿ ವೃದ್ಧ ಮಹಿಳೆ ಒಂಟಿಯಾಗಿರುವ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಆಕೆಯ ದೇಹವನ್ನು ಮೂರು ಭಾಗಗಳನ್ನಾಗಿ ಕತ್ತರಿಸಿ ಚೀಲದಲ್ಲಿ ತುಂಬಿದ್ದಾರೆ. ದೇಹವನ್ನು ಕತ್ತರಿಸಿದ ನಂತರ ರಕ್ತವನ್ನು ಸ್ವಚ್ಚಗೊಳಿಸುವ ಮೂಲಕ ಇಡೀ ರಾತ್ರಿ ಆಕೆಯ ಮನೆಯಲ್ಲಿ ಕಳೆದಿದ್ದಾರೆ. ನಂತರ ಆಕೆಯ ದೇಹವನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ನಜಫ್ಗಢದ ಚರಂಡಿಗೆ ಎಸೆದಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಜೂನ್ 30 ರಿಂದ ಮರುದಿನ ಬೆಳಿಗ್ಗೆ 5 ರಿಂದ ಸಂಜೆ 9 ರವರೆಗೆ ದಂಪತಿಗಳು ತಮ್ಮ ನೆರೆಯ ಮನೆಯಲ್ಲಿದ್ದರು.
ದೇಹವನ್ನು ಚರಂಡಿಗೆ ಎಸೆಯುವ ಮೊದಲು ವೃದ್ಧ ಮಹಿಳೆಯ ದೇಹದಿಂದ ಆಭರಣಗಳನ್ನು ತೆಗೆದಿದ್ದಾರೆ. ಜನಪ್ರಿಯ ಹಣಕಾಸು ಕಂಪನಿಯೊಂದರಲ್ಲಿ ಆಭರಣವನ್ನು ಅಡವಿಟ್ಟು ಪ್ರತಿಯಾಗಿ 70,000 ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಮೀನಾ ಎನ್ಡಿಟಿವಿಗೆ ತಿಳಿಸಿದ್ದಾರೆ.
“ಮಹಿಳೆಯ ಸೊಸೆ ಜುಲೈ 3 ರಂದು ವೃದ್ಧೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾಳೆ. ಅವಳ ಮನೆಗೆ ಬೀಗ ಹಾಕಲಾಗಿದೆ ಎಂದು ದೂರಿನೊಂದಿಗೆ ನಮ್ಮ ಬಳಿಗೆ ಬಂದಳು. ನಾವು ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ನೆರೆಹೊರೆಯವರನ್ನು ಪತ್ತೆಹಚ್ಚಲು ತಂಡವನ್ನು ಕಳುಹಿಸಿದೆ “ಎಂದು ಮೀನಾ ಹೇಳಿದರು.
ದಂಪತಿಯನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆ ಹಚ್ಚಿ ಸೋಮವಾರ ಬಂಧಿಸಲಾಗಿದೆ. ಪೊಲೀಸರು ಅದೇ ದಿನ ಮಹಿಳೆಯ ಶವವನ್ನು ಚರಂಡಿಯಿಂದ ವಶಪಡಿಸಿಕೊಂಡಿದ್ದಾರೆ.