ಗುಜರಾತ್ನ ದ್ವಾರಕಾ ದೇಗುಲಕ್ಕೆ ಅಪ್ಪಳಿಸಿದ ಸಿಡಿಲು : ಧ್ವಜಕ್ಕೆ ಹಾನಿ..!
ಜಗತ್ ಮಂದಿರ ಎಂದೂ ಕರೆಯಲ್ಪಡುವ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಗುಜರಾತ್ನ ದ್ವಾರಕಾ ದೇಗುಲಕ್ಕೆ ಸಿಡಿದಿದೆ.
ಗುಜರಾತ್ನ ದೇವಭೂಮಿ-ದ್ವಾರಕಾ ಜಿಲ್ಲೆಯ ವಿಶ್ವಪ್ರಸಿದ್ಧ ದ್ವಾರಕಧಿಶ್ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ದೇವಾಲಯದ ಮೇಲಿರುವ ಧ್ವಜ ಹಾನಿಗೊಳಗಾಗಿದೆ. ದೇವಸ್ಥಾನ ರಚನೆಗೆ ಯಾವುದೇ ಹಾನಿ ಸಂಭವಿಸಿಲ್ಲ.
ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯಕ್ಕೆ ಮಿಂಚು ಬಡಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವಭೂಮಿ-ದ್ವಾರಕಾ ಜಿಲ್ಲಾಡಳಿತದೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.
ಲೋಕಸಭಾ ಕ್ಷೇತ್ರವಾದ ಗಾಂಧಿನಗರದಲ್ಲಿರುವ ಶಾ ಅವರ ಕಚೇರಿ ಹೊರಡಿಸಿರುವ ಹೇಳಿಕೆಯ ಪ್ರಕಾರ, ಮಿಂಚು ದೇವಾಲಯದ ರಚನೆಗೆ ಯಾವುದೇ ಹಾನಿ ಮಾಡಿಲ್ಲ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅದು ಹೇಳಿದೆ.
ಘಟನೆಯ ಎರಡು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿವೆ. ಮಿಂಚು ರಚನೆಗೆ ಹಾನಿಯಾಗದಿದ್ದರೂ, ವೀಡಿಯೊವೊಂದರಲ್ಲಿ ದೇವಾಲಯದ ಮೇಲಿರುವ ಧ್ವಜ ಹರಿದಿದೆ ಎಂದು ತೋರಿಸಿದೆ.
ದ್ವಾರಕಾಧಿಶ್ ದೇವಾಲಯವನ್ನು ಜಗತ್ ಮಂದಿರ ಎಂದೂ ಕರೆಯಲ್ಪಡುವ ಸುಮಾರು 2,000 ವರ್ಷಗಳಷ್ಟು ಹಳೆಯದಾಗಿದೆ.