ಕುಮಾರಸ್ವಾಮಿಯೊಂದಿಗೆ ಇಂದ್ರಜಿತ್ ಇರುವ ಫೋಟೋ ವೈರಲ್ : ಹೆಚ್ಡಿಕೆ ಸ್ಪಷ್ಟನೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿರುವಾಗ ಕುಮಾರಸ್ವಾಮಿಯೊಂದಿಗೆ ಇಂದ್ರಜಿತ್ ಇರುವ ಫೋಟೋ ವೈರಲ್ ಆಗಿದೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹೌದು… ವೈರಲ್ ಫೋಟೋದ ಬಗ್ಗೆ ಮಾತನಾಡಿದ ಕುಮಾರಸ್ವಾಂಮಿ ಅವರು, ಇಂದ್ರಜಿತ್ ಹಲವಾರು ಬಾರಿ ನನ್ನನ್ನು ಭೇಟಿ ಮಾಡಿದ್ದಾರೆ. ಇತ್ತೀಚೆಗೆ ನನ್ನನ್ನು ಅವರು ಭೇಟಿ ಮಾಡಿಲ್ಲ. ಯಾಕೆ ಈ ಪ್ರಕರಣದಲ್ಲಿ ನನ್ನನ್ನು ತರಲು ಪ್ರಯತ್ನಿಸುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಸಂಸದೆ ಸುಮಲತಾ ಬಣ ಕುಮಾರಸ್ವಾಮಿ ಕೊಟ್ಟ ಕನ್ನಂಬಾಡಿ ಹೇಳಿಕೆ ವಿರುದ್ದ ತಿರುಗಿ ಬಿದ್ದಿತ್ತು. ರೆಬೆಲ್ ಲೇಡಿ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಮಂಡ್ಯ ಗಣಿ ಸಮರಾ ಇನ್ನೂ ತಣ್ಣಗಾಗಿಲ್ಲ. ಅದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಸಪ್ಲೈಯರ್ ಮೇಲೆ ಹಲ್ಲೆಯ ಆರೋಪ ಮಾಡಿದ್ದಾರೆ.
ಆದರೆ ಹಲ್ಲೆ ಆರೋಪವನ್ನು ತಳ್ಳಿ ಹಾಕಿದ ದರ್ಶನ್ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ನಿನ್ನೆ ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದರು.
ಈ ಮಧ್ಯೆ ಕುಮಾರಸ್ವಾಮಿಯೊಂದಿಗೆ ಇಂದ್ರಜಿತ್ ಇರುವ ಫೋಟೋ ವೈರಲ್ ಆಗಿದೆ. ದರ್ಶನ್ ಹೇಳಿಕೊಂಡ ಕಾಣದ ಕೈಗಳು ಇವರೇನಾ ಎನ್ನುವ ಅನುಮಾನ ಸದ್ಯ ಮೂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ ಇಂದ್ರಜಿತ್ ನನ್ನನ್ನು ಹಲವಾರು ಭೇಟಿ ಮಾಡುತ್ತಾರೆ. ಇತ್ತೀಚೆಗೆ ಅವರು ನನ್ನನ್ನು ಭೇಟಿ ಮಾಡಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ಎಳೆಯಬೇಡಿ ಎಂದು ಹೇಳಿದ್ದಾರೆ.